Webdunia - Bharat's app for daily news and videos

Install App

ಇನ್ನು ಕರ್ನಾಟಕದ ಎಲ್ಲಾ ಶಾಲೆಗಳಲ್ಲೂ ಕನ್ನಡ ಕಡ್ಡಾಯ..!!

ನಾಗಶ್ರೀ ಭಟ್
ಗುರುವಾರ, 15 ಫೆಬ್ರವರಿ 2018 (13:15 IST)
1 ರಿಂದ 5 ನೇ ತರಗತಿಯವರೆಗೆ ಎಲ್ಲಾ ಶಾಲೆಗಳಲ್ಲಿಯೂ ಕನ್ನಡ ಕಲಿಸಲೇಬೇಕು ಎನ್ನುವ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಕನ್ನಡ ಭಾಷೆಯ ಕಲಿಕೆಯನ್ನು ಉತ್ತೇಜಿಸಲು ಈ ನಿಯಮವನ್ನು ಜಾರಿಗೊಳಿಸಿದ್ದು  ಇದು ಕನ್ನಡಿಗೇತರ ಪೋಷಕರಿಗೆ ಸಮಸ್ಯೆಯನ್ನು ತಂದೊಡ್ಡಿದೆ.
ಹಲವು ಜನರು ತಮ್ಮ ಮಕ್ಕಳ ಅಂಕಗಳ ಕುರಿತು ಚಿಂತಿತರಾಗಿದ್ದು ಅವರನ್ನು ಟ್ಯೂಶನ್‌ಗಳಿಗೆ ಕಳುಹಿಸಲು ಪ್ರಾರಂಭಿಸಿದ್ದಾರೆ. ಕೆಲವು ಪೋಷಕರು ಕನ್ನಡವನ್ನು ಕಲಿಯಲು ಆನ್‌ಲೈನ್ ಕೋರ್ಸ್‌ಗಳನ್ನು ಸೇರಿಕೊಂಡಿದ್ದಾರೆ. ಕನ್ನಡಿಗೇತರ ಪೋಷಕರಿಗೆ ಮತ್ತು ಮಕ್ಕಳಿಗಿಬ್ಬರಿಗೂ ಕಠಿಣ ಸ್ಥಿತಿ ಎದುರಾಗಿದ್ದು ಮಕ್ಕಳು ಬಲವಂತವಾಗಿ ಕನ್ನಡವನ್ನು ಕಲಿಯಬೇಕಾಗಿದೆ.
 
"ಒಬ್ಬ ಪೋಷಕಳಾಗಿ, ನನ್ನ ಮಗು ಈಗಾಗಲೇ ಹೆಚ್ಚಿನ ಸಿಲೆಬಸ್‌ನೊಂದಿಗೆ ಕಷ್ಟಪಡುತ್ತಿರುವಾಗ ಕನ್ನಡ ಕಲಿಕೆಯಲ್ಲಿ ನಾನು ಹೇಗೆ ಸಹಾಯ ಮಾಡಬೇಕು ಎಂದು ಚಿಂತಿತಳಾಗಿದ್ದೇನೆ. ಈಗಾಗಲೇ ಇರುವ ಸಿಲೆಬಸ್ ಮತ್ತು ಕಳಪೆ ಗುಣಮಟ್ಟದ ಬೋಧನೆಯಿಂದ ಮಕ್ಕಳು ಬಹಳಷ್ಟು ಬಳಲುತ್ತಿದ್ದಾರೆ, ಇದು ಕೇವಲ ಅವರ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ಒಬ್ಬ ಪೋಷಕರಾಗಿ ತಮ್ಮ ತೊಂದರೆಯನ್ನು ನಿವೇದಿತಾ ಹೇಳಿಕೊಂಡಿದ್ದಾರೆ.
 
ಹಲವು ಕನ್ನಡಿಗೇತರ ಪೋಷಕರು ಮಕ್ಕಳ ಹೋಮ್‌ವರ್ಕ್‌ನಲ್ಲಿ ತಮ್ಮ ಕನ್ನಡ ಸ್ನೇಹಿತರ ಸಹಾಯವನ್ನು ಪಡೆಯುತ್ತಿದ್ದಾರೆ. ಮಕ್ಕಳು ಕನ್ನಡದ ಪೂರ್ಣ ಸಿಲೆಬಸ್ ಅನ್ನು ಕಲಿಯಬೇಕಾಗಿರುವುದರಿಂದ ಪೋಷಕರು ತಮ್ಮ ಮಕ್ಕಳಿಗೆ ಸಹಾಯ ಮಾಡಲು ಮೊದಲ ಹಂತದ ಕನ್ನಡವನ್ನು ಕಲಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ ಎನ್ನುವುದು ಹಲವರ ಅಭಿಪ್ರಾಯವಾಗಿದೆ.
 
ಕನ್ನಡವನ್ನು ಕಡ್ಡಾಯವಾಗಿಸಿರುವ ನಿಯಮದಿಂದ ಹಲವು ಖಾಸಗಿ ಶಾಲೆಗಳು ಸಂತೋಷವಾಗಿಲ್ಲ. ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನೋಡಲು ಹಲವು ಶಾಲೆಗಳು ಮತ್ತು ಶಿಕ್ಷಕರು ಕಾಯುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

Indore Raja Raghuvanshi murder: ಗಂಡನ ಕೊಲೆ ಮಾಡಿದ ಸೋನಂ ಅದೊಂದನ್ನು ಮಾತ್ರ ಬಿಟ್ಟು ಹೋಗಿದ್ದಳು

Pradeep Eshwar: ಮೋದಿ 11 ವರ್ಷದಲ್ಲಿ ಕಡಿದು ಕಟ್ಟೆ ಹಾಕಿದ್ದಾರೆ ಬಿಡ್ರಿ: ಪ್ರದೀಪ್ ಈಶ್ವರ್

ಕುರ್ಚಿ ಉಳಿಸಿಕೊಳ್ಳಲು ಭಾರತದ ಜೊತೆಗೇ ಯುದ್ಧ ಮಾಡಲು ಹೊರಟಿದ್ದರಂತೆ ಬಾಂಗ್ಲಾ ಪ್ರಧಾನಿ ಯೂನಸ್

ಮುಂದಿನ ಸುದ್ದಿ
Show comments