Select Your Language

Notifications

webdunia
webdunia
webdunia
webdunia

ಪೊಲೀಸ್ ವಾಹನಗಳು ಹಾಗೂ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್

ಪೊಲೀಸ್ ವಾಹನಗಳು ಹಾಗೂ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್
bangalore , ಗುರುವಾರ, 14 ಅಕ್ಟೋಬರ್ 2021 (20:51 IST)
ಬೆಂಗಳೂರು: ಗುರುವಾರ ದಸರಾ ಹಬ್ಬದ ಪ್ರಯುಕ್ತ ಆಯುಧ ಪೂಜೆ ಹಿನ್ನಲೆಯಲ್ಲಿ ನಗರದ ಚಾಮರಾಜಪೇಟೆಯ ಸಿ.ಎ.ಆರ್ (ಸಿಟಿ ಆರ್ಮ್ ರಿಸೆರ್ವ್) ಕಛೇರಿಯಲ್ಲಿ ಆಯುಧ ಪೂಜೆ ನೆಡೆಯಿತು. ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭಾಗವಹಿಸಿದ್ದರು. 
 
ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ನಗರದ ಎಲ್ಲಾ ಡಿಸಿಪಿಗಳು ಪೂಜೆ ನೆರವೇರಿಸಿದರು. ಸಿ.ಎ.ಆರ್ ಕಛೇರಿಯಲ್ಲಿರುವ  ಎಲ್ಲಾ ಪೊಲೀಸ್ ವಾಹನಗಳಾದ, ಹೊಯ್ಸಳ, ಚೀತಾ ವಾಹನಗಳು ಹಾಗೂ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ ಆಯುಕ್ತ ಕಮಲ್ ಪಂತ್ ದಸರಾ ಹಬ್ಬದ ಪ್ರಯುಕ್ತ ಸಿಎಆರ್ ಕಚೇರಿಯಲ್ಲಿ ದುರ್ಗ ದೇವಿ ಮೂರ್ತಿಯನ್ನು ಕೂಡ ಪ್ರತಿಷ್ಟಾಪನೆ ಮಾಡಿದರು. 
 
ದುರ್ಗ ದೇವಿಗೆ ಪೂಜೆ ಮಾಡಿ ನಮನ ಸಲ್ಲಿಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಲ್ಲಾ ಪೊಲೀಸ್ ಸಿಬ್ಬಂದಿ ಸಾಥ್ ನೀಡಿದ್ದರು. ನಗರದ ಬಹುತೇಕ ಪೊಲೀಸ್ ಠಾಣೆಗಳಲ್ಲಿ ದಸರಾ ಹಬ್ಬವನ್ನು  ತಳಿರು ತೋರಣ ಕಟ್ಟಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
police

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೂ ಮೂರು ದಿನ ರಾಜ್ಯದಲ್ಲಿ ಮಳೆ: ಹವಾಮಾನ ಇಲಾಖೆ