Select Your Language

Notifications

webdunia
webdunia
webdunia
webdunia

ನಗರದ ಬಿನ್ನಿಪೇಟೆ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ವಾಸವಾಗಿದ್ದವರಿಗೆ ಪರ್ಯಾಯ ವ್ಯವಸ್ಥೆ-ಕಮಲ್ ಪಂತ್

ನಗರದ ಬಿನ್ನಿಪೇಟೆ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ವಾಸವಾಗಿದ್ದವರಿಗೆ ಪರ್ಯಾಯ ವ್ಯವಸ್ಥೆ-ಕಮಲ್ ಪಂತ್
bangalore , ಶನಿವಾರ, 16 ಅಕ್ಟೋಬರ್ 2021 (22:11 IST)
ಬೆಂಗಳೂರು: ನಗರದ ಬಿನ್ನಿಪೇಟೆ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ವಾಸವಾಗಿದ್ದವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಇನ್ನಿತರ ಕ್ವಾರ್ಟರ್ಸ್​ನಲ್ಲಿ ಹೊಸದಾಗಿ ವಾಸಕ್ಕೆ ಅಲಾಟ್ ಮಾಡಿದ್ದೇವೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂಜಿನಿಯರ್​ಗಳು, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್​ನಿಂದ ಪರಿಶೀಲನೆ ನಡೆಸಲಾಗಿದೆ. ಕ್ವಾರ್ಟರ್ಸ್ ಕಟ್ಟಡ ವಾಲಲು ಕಾರಣ ಏನು ಎಂಬ ಬಗ್ಗೆ ಅವರು ವರದಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಕಟ್ಟಡದಲ್ಲಿ ತಾಂತ್ರಿಕ ಕೊರತೆ ಇದೆ. ಕಟ್ಟಡದಲ್ಲಿ ಎರಡು ವರ್ಷದಿಂದ ಜನರು ವಾಸವಿದ್ದಾರೆ. ಅಕ್ಟೋಬರ್ 16 ಈ ಘಟನೆ ಬಗ್ಗೆ ವರದಿ ಕೊಟ್ಟಿದ್ದಾರೆ. ಕಟ್ಟಡ ವಾಲಲು ಕಾರಣ ಏನು ಎಂಬ ಬಗ್ಗೆ ವರದಿಗೆ ಕಳುಹಿಸಲಾಗಿದೆ. ಜೊತೆಗೆ ಪರಿಹಾರ ಸಹ ಹುಡುಕಬೇಕಾಗಿದೆ. ಸದ್ಯಕ್ಕೆ ವಾಸವಾಗಿದ್ದವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
bangalore

Share this Story:

Follow Webdunia kannada

ಮುಂದಿನ ಸುದ್ದಿ

ಅರಬ್ಬಿ ಸಮುದ್ರದ ಲಕ್ಷದ್ವೀಪ ಹಾಗೂ ಬಂಗಾಳಕೊಲ್ಲಿಯ ಆಗ್ನೇಯದಲ್ಲಿ ವಾಯುಭಾರ ಕುಸಿತ