Select Your Language

Notifications

webdunia
webdunia
webdunia
webdunia

ರಮಾನಾಥ್ ರೈಗೆ ಕಲ್ಲಡ್ಕ ಪ್ರಭಾಕರ್ ಭಟ್ ತಿರುಗೇಟು

ರಮಾನಾಥ್ ರೈಗೆ ಕಲ್ಲಡ್ಕ ಪ್ರಭಾಕರ್ ಭಟ್ ತಿರುಗೇಟು
ಮಂಗಳೂರು , ಸೋಮವಾರ, 19 ಜೂನ್ 2017 (20:18 IST)
ಕಲ್ಲಡ್ಕ ಪ್ರಭಾಕರ್ ಭಟ್ ಒಬ್ಬ ಪುಕ್ಕಲ ಅವನು ಭಾಷಣ ಮಾಡಿದರೆ 307 ಕೇಸ್ ದಾಖಲಿಸಿ ಬಂಧಿಸುವಂತೆ ದಕ್ಷಿಣ ಜಿಲ್ಲಾ ಎಸ್`ಪಿ ಅವರನ್ನ ಬಂಟ್ವಾಳಕ್ಕೆ ಕರೆಸಿಕೊಂಡು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಮಾಡಿರುವ ಆದೇಶದ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ.

ಈ ಬಗ್ಗೆ ಇವತ್ತು ವಿಧಾನಮಂಡಲದಲ್ಲೂ ಕೋಲಾಹಲ ಉಂಟಾಯಿತು. ರಮಾನಾಥ್ ರೈ ಬಂಧನಕ್ಕೆ ಪಟ್ಟು ಹಿಡಿದ ಪ್ರತಿಪಕ್ಷ ಬಿಜೆಪಿ ಪ್ರತಿಭಟನೆ ನಡೆಸಿತು. ಇತ್ತ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ರಮಾನಾಥ್ ರೈ ಹೇಳಿಕ ಕುರಿತಂತೆ ಪ್ರತಿಕ್ರಿಯಿಸಿದ ಪ್ರಭಾಕರ್ ಭಟ್, ನನ್ನ ವಿರುದ್ಧ ದೂರು ದಾಖಲಿಸುವಂತೆ ಪೊಲಿಸರಿಗೆ ಹೇಳಲು ಇವರ್ಯಾರು..? ನಾನು ಪ್ರಚೋದನಕಾರಿ ಭಾಷಣ ಮಾಡಿದ್ದರೆ ತೋರಿಸಲಿ. ನಮ್ಮ ಊರಿನಲ್ಲಿ ಹಿಂದೂ ಮುಸ್ಲಿಮರೆಲ್ಲರೂ ಸಾಮರಸ್ಯದ ಜೀವನ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ. ಈ ರೀತಯ ಮಂತ್ರಿ ಇರುವುದು ನಮ್ಮ ಜಿಲ್ಲೆಗೆ ನಾಚಿಕೆಗೇಡಿನ ವಿಷಯ. ಸಿಎಂ ಸಿದ್ದರಾಮಯ್ಯ ರಮಾನಾಥ್ ರೈ ಬಾಯಿ ಮುಚ್ಚಿಸಲಿ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತಾಬ್ ಬಚ್ಚನ್ ಜಿಎಸ್ ಟಿ ರಾಯಭಾರಿ