Publish Date: Mon, 23 Apr 2018 (13:02 IST)
Updated Date: Mon, 23 Apr 2018 (13:04 IST)
ಕಲಬುರಗಿ ನಗರದ ಖರ್ಗೆ ಪೆಟ್ರೋಲ್ ಬಂಕ್ ಬಳಿ ಮಧ್ಯರಾತ್ರಿ ಎರಡು ಗುಂಪುಗಳು ನಡುವೆ ಗ್ಯಾಂಗ್ ವಾರ್ ನಡೆದಿದ್ದು ಒರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ರಾಹುಲ್ ಹೊನ್ನಳ್ಳಿ ಮತ್ತು ವಿರತ್ಯಾ ಉಪಾಧ್ಯಯ ಗ್ಯಾಂಗ್ಗಳ ಮಧ್ಯೆ ಗ್ಯಾಂಗ್ವಾರ್ ನಡೆದಿದ್ದು ರಾಹುಲ್ ಹೊನ್ನಳ್ಳಿ ಗ್ಯಾಂಗ್ನ ವಿಜಯಕುಮಾರ ಎನ್ನುವಾತನಿಗೆ ಗಂಭೀರ ಗಾಯಗಳಾಗಿದ್ದು ಆತನನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಿನ್ನೆ ರಾತ್ರಿ ಕಾರಿನಲ್ಲಿ ಹೊರಟಿದ್ದ ವಿಜಯಕುಮಾರ್ ಮೇಲೆ ವಿರತ್ಯಾ ಉಪಾಧ್ಯಯ ಗ್ಯಾಂಗ್ ನವರು ಮೂರು ಬೈಕ್ ಗಳ ಮೇಲೆ ಬಂದು ಏಕಾಏಕಿ ಮಚ್ಚು, ಲಾಂಗ್ಗಳಿಂದ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಇತ್ತ ವಿಜಯಕುಮಾರ್ನ ಬೆಂಬಲಿಗರು ಕೂಡ ಪ್ರತಿದಾಳಿ ಮಾಡಿದ್ದಾರೆನ್ನಲಾಗಿದೆ.
ಹೀಗಾಗಿ ಇಬ್ಬರ ಮಧ್ಯೆ ಹೊಡೆದಾಟ ನಡೆದಿದ್ದು ವಿಜಯಕುಮಾರಗೆ ಗಾಯಗಳಾಗಿವೆ. ಹಳೆ ವೈಷಮ್ಯದ ಹಿನ್ನಲೆ ಈ ಗ್ಯಾಂಗ್ ವಾರ್ ನಡೆದಿದೆ ಎನ್ನಲಾಗುತ್ತಿದೆ. ಈ ಕುರಿತು ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.