Select Your Language

Notifications

webdunia
webdunia
webdunia
webdunia

‘ಕೈ’, ಜೆಡಿಎಸ್ ಕೋಟೆ ಮೇಲೆ ಕೇಸರಿ ಮಿಸೈಲ್!

‘ಕೈ’, ಜೆಡಿಎಸ್ ಕೋಟೆ ಮೇಲೆ ಕೇಸರಿ ಮಿಸೈಲ್!
bangalore , ಗುರುವಾರ, 20 ಏಪ್ರಿಲ್ 2023 (14:27 IST)
ಕರ್ನಾಟಕ ಬಿಜೆಪಿ ಭಾರೀ ರಣತಂತ್ರ ಹೆಣೆದಿದೆ. ಕಾಂಗ್ರೆಸ್​, ಜೆಡಿಎಸ್ ಕೋಟೆ ಮೇಲೆ ಕೇಸರಿ ಮಿಸೈಲ್ ಹಾರಿಸಲು ಪ್ಲ್ಯಾನ್​​ ಮಾಡಿಕೊಂಡಿದೆ.. ಒಕ್ಕಲಿಗ ಕ್ಷೇತ್ರಗಳನ್ನೇ ಟಾರ್ಗೆಟ್ ಮಾಡಿರುವ ಬಿಜೆಪಿ ಹೈಕಮಾಂಡ್​​, ಪ್ರಬಲ ಅಭ್ಯರ್ಥಿಗಳನ್ನು ಕಟ್ಟಿಹಾಕಲು ಪ್ಲ್ಯಾನ್ ಮಾಡಿಕೊಂಡಿದೆ.. ಹೊಳೆನರಸೀಪುರದಲ್ಲಿ ಮಾಜಿ ಸಚಿವ H.D. ರೇವಣ್ಣ ವಿರುದ್ಧ ಹಾಸನ ಶಾಸಕ ಪ್ರೀತಂಗೌಡ ಕಣಕ್ಕೆ ಇಳಿಯುವ ಸಾಧ್ಯತೆಯಿದ್ದು, ಈ ಕುರಿತು ಮಾಹಿತಿ ನೀಡುವುದಾಗಿ ಪ್ರೀತಂಗೌಡ ಆಶ್ಚರ್ಯ ಮೂಡಿಸಿದ್ದಾರೆ.. ವರಿಷ್ಠರ ಸೂಚನೆಗಾಗಿ ಪ್ರೀತಂಗೌಡ ಕಾಯುತ್ತಿದ್ದಾರೆ ಎನ್ನಲಾಗಿದೆ.. ಅಂತೆಯೇ ಅತ್ತ ಕನಕಪುರದಲ್ಲಿ KPCC ಅಧ್ಯಕ್ಷ D.K. ಶಿವಕುಮಾರ್​ ವಿರುದ್ಧ ಸಚಿವ ಆರ್​​​. ಅಶೋಕ್​ರನ್ನು ಬಿಜೆಪಿ ಹೈಕಮಾಂಡ್​​ ಕಣಕ್ಕಿಳಿಸುತ್ತಿದೆ.. ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ತಂತ್ರಗಾರಿಕೆ ರೂಪಿಸಿದ್ದು, ಸಂಸದೆ ಸುಮಲತಾ ಮೂಲಕ ಜೆಡಿಎಸ್, ಕಾಂಗ್ರೆಸ್​ಗೆ ಟಕ್ಕರ್ ಕೊಡಲು ತಯಾರಿ ನಡೆಸಿದ್ದಾರೆ.. ಅತ್ತ ವರುಣಾದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಕಟ್ಟಿ ಹಾಕಲು ಸೋಮಣ್ಣರನ್ನು ಕಣಕ್ಕೆ ಇಳಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಷದ ವರಿಷ್ಠರು ಹೇಳಿದಂತೆ ಮಾಡ್ತೇನೆ