Select Your Language

Notifications

webdunia
webdunia
webdunia
webdunia

‘ಕೈ’ ಶೋಷಿತರನ್ನ ಮತ ಬ್ಯಾಂಕ್ ಮಾಡಿಕೊಂಡಿತ್ತು’

‘ಕೈ’ ಶೋಷಿತರನ್ನ ಮತ ಬ್ಯಾಂಕ್ ಮಾಡಿಕೊಂಡಿತ್ತು’
bangalore , ಸೋಮವಾರ, 10 ಏಪ್ರಿಲ್ 2023 (16:41 IST)
ಕಾಂಗ್ರೆಸ್ ದಶಕಗಳ ಕಾಲ ಶೋಷಿತರನ್ನ ಮತ ಬ್ಯಾಂಕ್ ಆಗಿ ಮಾಡಿಕೊಂಡಿತ್ತು.. ಆದರೆ ನಮ್ಮ ಸರ್ಕಾರ SC/ST, ಹಿಂದುಳಿದ ವರ್ಗಗಳು, ಲಿಂಗಾಯತ ಸಮುದಾಯ ಸೇರಿದಂತೆ ಇತರೆ ಸಮುದಾಯಕ್ಕೆ ಮೀಸಲಾತಿ ನೀಡಿದೆ ಎಂದು ಕಾಂಗ್ರೆಸ್​ ವಿರುದ್ಧ ರಾಜ್ಯ BJP ಪ್ರಧಾನ ಕಾರ್ಯದರ್ಶಿ N. ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಸಾಕಷ್ಟು ಜನ ಶೋಷಿತರಿದ್ದಾರೆ. ಆದರೆ ಈ ಶೋಷಿತ ಸಮುದಾಯಗಳಿಗೆ ಮೀಸಲಾತಿ ಕೊಟ್ಟಿದ್ದು ಮಾತ್ರ ಬಿಜೆಪಿ ಸರ್ಕಾರ.. ಒಳ ಮೀಸಲಾತಿಗಾಗಿ ಸಾಕಷ್ಟು ಹೋರಾಟಗಳು ನಡೆಯುತ್ತಿತ್ತು. ಆದರೆ ಸಾಮಾಜಿಕ ನ್ಯಾಯದ ಅವಶ್ಯಕತೆ ಯಾರಿಗಿತ್ತು ಎಂದು ಕಾಂಗ್ರೆಸ್​​ ವಿರುದ್ಧ ಆಕ್ರೊಶಗೊಂಡ್ರು. ಶೋಷಿತ ಸಮಾಜಕ್ಕೆ ನ್ಯಾಯ ಕೊಡಿಸುವ, ಉದ್ಯೋಗ ನೀಡುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ. BJP ಸರ್ಕಾರ ರೈತರ ಸರ್ಕಾರ.. ರೈತ ಬಜೆಟ್ ಅನ್ನ ಕೊಟ್ಟ ಮೊದಲ ಸರ್ಕಾರ ಕರ್ನಾಟಕ ಸರ್ಕಾರ ಎಂದು ಹೊಗಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಕಮಲದ ಪರ ಪವನ್ ಕಲ್ಯಾಣ್​ ಪ್ರಚಾರ