Webdunia - Bharat's app for daily news and videos

Install App

ಕ್ಷುಲ್ಲಕ ಕಾರಣಕ್ಕೆ ನ್ಯಾಯಾಧೀಶರ ಮಗನ ಮೇಲೆ ಹಲ್ಲೆ

Webdunia
ಭಾನುವಾರ, 29 ಆಗಸ್ಟ್ 2021 (20:01 IST)
ಬೆಂಗಳೂರು: ಕ್ಷುಲ್ಲಕ ವಿಷಯಕ್ಕೆ ಕುಪಿತರಾದ ಸಹಪಾಠಿಗಳು ತನ್ನ ಸ್ನೇಹಿತನ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
 
ನಗರದ ನಿವಾಸಿಗಳಾದ ತೇಜಸ್ ಕುಮಾರ್, ಮನೋಜ್, ತುಷಾರ್, ಶಂಕರ್, ರೀಜಾ ಜೋಸೆಫ್, ಸುಜಿತ್ ರಾಜ್ ಹಾಗೂ ಅಖಿಲೇಶ್ ಹಲ್ಲೆ ನಡೆಸಿದ ಸ್ನೇಹಿತರು ಎಂದು ತಿಳಿದು ಬಂದಿದೆ. ನ್ಯಾಯಾಧೀಶರ ಮಗ ಎನ್ನಲಾದ ಸಾಥ್ವಿಕ್ ಹಲ್ಲೆಗೊಳಗಾದ ಸಹಪಾಠಿ.
 
ನಗರದ ಎಸ್.ಸಿ ರೋಡ್‌ನ ಬಿಎಂಸ್ ಲಾ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ಓದುತ್ತಿರುವ ನ್ಯಾಯಾಧೀಶರ ಮಗ ಸಾಥ್ವಿಕ್, ತರಗತಿಯ ಲೀಡರ್(ಕ್ಲಾಸ್‌ನ ರೆಪ್ರಸೆಂಟೆಟಿವ್) ಆಗಿದ್ದನು. ತನ್ನ ಸಹಪಾಠಿಗಳು ತರಗತಿಗೆ ಸರಯಾಗಿ ಬರುತ್ತಿಲ್ಲ ಎಂದು ಉಪನ್ಯಾಸಕರಿಗೆ ವರದಿ ಕೊಟ್ಟಿದ್ದನು. ಇದರಿಂದಾಗಿ ಸಹಪಾಠಿಗಳೆಲ್ಲರೂ ಸಾಥ್ವಿಕ್ ವಿರುದ್ಧ ಕುಪಿತರಾಗಿದ್ದರು. ಅಲ್ಲದೆ, ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ.
 
ಊಟಕ್ಕೆ ಆಹ್ವಾನ ನೆಪದಲ್ಲಿ ಹಲ್ಲೆ:
ಹಲ್ಲೆ ನಡೆಸುವ ಸಲುವಾಗಿ ಸಾಥ್ವಿಕ್‌ನನ್ನು ಸಹಪಾಠಿಗಳು, ಆ.26 ರಂದು ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದ ಬಳಿಯ ಹೋಟೆಲ್‌ವೊಂದರಲ್ಲಿ ಸೇರಿದ್ದರು. ಸಾಥ್ವಿಕ್‌ನನ್ನು ಊಟಕ್ಕೆ ಆಹ್ವಾನಿಸಿದ್ದರು. ಅದರಂತೆ, ಮಧ್ಯಾಹ್ನ 2.15ರ ಸುಮಾರಿಗೆ ಸಾಥ್ವಿಕ್ ತೆರಳಿದ್ದನು. ಈ ವೇಳೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹಲ್ಲೆ ನಡೆಸುವ ವೇಳೆ ಸಹಪಾಠಿ ತೇಜಸ್ ವಿರುದ್ಧ ರೂಮರ್ಸ್ ಹರಡಿಸುತ್ತೀಯಾ? ಎಂದು ಧಮ್ಕಿ ಹಾಕಿದ್ದಾರೆ. ಈ ವೇಳೆ ಸಾದ್ವಿಕ್ ಮೊಬೈಲ್ ತೆಗೆದು ಪೋಷಕರಿಗೆ ಕರೆ ಮಾಡಲು ಮುಂದಾದಾಗ ಬಾಟಲಿಯಿಂದ ಹಲ್ಲೆ ನಡೆಸಿ, ಮೊಬೈಲ್‌ನ್ನು ಒಡೆದು ಹಾಕಿದ್ದಾರೆ. ಸಹಪಾಠಿಗಳು ನಡೆಸಿದ ಹಲ್ಲೆಯಿಂದಾಗಿ ಸಾಥ್ವಿಕ್ ಮುಖ, ತುಟಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
 
ಈ ಘಟನೆ ಸಂಬಂಧ ಹಲ್ಲೆಗೊಳಗದ ಸಾಥ್ವಿಕ್‌ನ ಪೋಷಕರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2019 ರಲ್ಲಿ ತೀರಿಕೊಂಡಿದ್ದ ಅರುಣ್ ಜೇಟ್ಲಿ 2020 ರಲ್ಲಿ ಬೆದರಿಕೆ ರಾಹುಲ್ ಗಾಂಧಿಗೆ ಬೆದರಿಕೆ ಹಾಕಿದ್ರಂತೆ

ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲು ಶಿಕ್ಷೆ, ಕಣ್ಣೀರು ಹಾಕಿದ ಅಜ್ಜ ದೇವೇಗೌಡ

ರಾಹುಲ್ ಗಾಂಧಿಯಿಂದ ಮತಗಳ್ಳತನ ಆರೋಪ: ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿತಂತ್ರ ಹೂಡಿದ ಬಿಜೆಪಿ

ಮೊಸಳೆಕಣ್ಣೀರು ಹಾಕುತ್ತಿರುವ ರಾಹುಲ್ ಗಾಂಧಿ, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಿ ಇದ್ರೂ: ಪಿ.ಸಿ.ಮೋಹನ್

ಮುಂಬೈ, ಕೋಲ್ಕತ್ತಾ ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ: ಇಂಡಿಗೋ ಮುಂದಿನ ಕ್ರಮಕ್ಕೆ ಮೆಚ್ಚುಗೆ

ಮುಂದಿನ ಸುದ್ದಿ
Show comments