Webdunia - Bharat's app for daily news and videos

Install App

ಜಲ ಪ್ರಳಯಕ್ಕೆ ಹೇಳ ಹೆಸರಿಲ್ಲದಂತಾದ ಜೋಡುಪಾಲ ಪ್ರವಾಸಿ ತಾಣ

Webdunia
ಭಾನುವಾರ, 19 ಆಗಸ್ಟ್ 2018 (15:05 IST)
ಮಡಿಕೇರಿ- ಮಂಗಳೂರು ರಸ್ತೆಯಲ್ಲಿ ಹಾದು ಬರುವಾಗ ಕಣಿವೆ ಪ್ರದೇಶ ಕಾಣ ಸಿಗುತ್ತದೆ. ಪ್ರಕೃತಿಯ ರಮಣೀಯ ಪ್ರದೇಶ ಆಗಿರುವ ಜೋಡುಪಾಲ ಪ್ರವಾಸಿಗರ ಆಕರ್ಷಣೀಯ  ಕೇಂದ್ರವು  ಆಗಿದೆ. ಜೋಡುಪಾಲಾದ 3 ಗ್ರಾಮಗಳು  ಈಗ ನಾಮಾವಶೇಷವಾಗಿವೆ.

ಇಲ್ಲಿದ್ದ  3 ಗ್ರಾಮಗಳ ಸುಮಾರು 300 ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಮನೆ ಮಠಗಳನ್ನೂ ಕಳೆದುಕೊಂಡ ಇಲ್ಲಿನ ನಿವಾಸಿಗಳು ಪಡುವ  ಪಾಡು ಹೇಳತೀರದಾಗಿದೆ. ಇಲ್ಲಿನ ಸಂತ್ರಸ್ತರಿಗೆ ಸಂಪಾಜೆ ಕಲ್ಲುಗುಂಡಿ  ಅರಂತೋಡು  ತೆಕ್ಕಿಲ ಶಾಲೆಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.

ಆದರೆ ಜೋಡುಪಾಲ ಸುಂದರ ಪ್ರದೇಶ ಇನ್ನು ಹಿಂದೆ ಇದ್ದಂತೆ  ಮರು ನಿರ್ಮಾಣ ಸಾಧ್ಯವಿಲ್ಲ. ರಸ್ತೆ ಬದಿಯಲ್ಲಿದ್ದ  ನೂರಾರು ಬ್ರಹತ್  ಮರಗಳು ಧರೆಗೆ  ಉರುಳಿವೆ. ರಸ್ತೆಯ ಕೆಳ ಭಾಗದಲ್ಲಿದ್ದ  ಹತ್ತಾರು ಮನೆಗಳು ಯಾವ ಕ್ಷಣಕ್ಕೂ  ಮುರಿದು  ಬೀಳುವ ಸಾಧ್ಯತೆ ಇದೆ. ಕಾಡಿನ ಮದ್ಯೆ ಹರಿದು ಹೋಗುತಿದ್ದ ಹಳ್ಳದಲ್ಲಿ  ದೊಡ್ಡ ಮರಗಳು ಉರುಳಿ ಬಿದ್ದು ನೀರು ಹರಿಯುವ ಪಥ ಬದಲಾಗಿದೆ. ಸೇತುವೆಗಳು ಮುರಿದು ಹೋಗಿವೆ. ರಸ್ತೆಗಳಲ್ಲಿ ಬಿರುಕು ಬಿಟ್ಟಿದ್ದು ರಸ್ತೆಯನ್ನೇ  ಹುಡಕ ಬೇಕಾದ  ಪರಿಸ್ಥಿತಿ ನಿರ್ಮಾಣವಾಗಿದೆ.

ಗಂಜಿ ಕೇಂದ್ರದಲ್ಲಿರುವ ಸಂತ್ರಸ್ತರರಿಗೆ  ಮತ್ತೆ ಅವರ ಮನೆಗೆ ಹೋಗುವ ಧೈರ್ಯ ಬರುತ್ತಿಲ್ಲ. ಯಾವಾಗ ಮತ್ತೆ ಪ್ರಕೃತಿ ಮುನಿಸಿಕೊಳ್ಳಬಹುದು  ಎಂಬ ಭೀತಿ ಜನರನ್ನು  ಕಾಡುತ್ತಿದೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ. ಜೋಡುಪಾಲ ಗುಡ್ಡ ಕುಸಿದು ಈ ಭಾಗದಲ್ಲಿ ಪ್ರವಾಹ ಬಂದಾಗ ನಮಗೆ ದಿಕ್ಕೇ  ತೋಚದಂತಾಯಿತು. ವೃದ್ಧ ತಂದೆಯನ್ನು  ಹೊತ್ತುಕೊಂಡು ಬಂದೆವು . ಇನ್ನು ಮುಂದೆ ಈ ಪರಿಸ್ಥಿತಿ ಬಾರದಿರಲಿ. ಆ ಕ್ಷಣ ನೆನೆದರೆ  ಭಯವಾಗುತ್ತದೆ  ಎನ್ನುತ್ತಾರೆ ಜೋಡುಪಾಲ ನಿವಾಸಿ ಜಯಶ್ರೀ. ಪ್ರಕೃತಿ ಮುನಿಸಿದರೆ  ಎಷ್ಟ್ಟು ದೊಡ್ಡ ದುರಂತವನ್ನು  ತಡೆಯಲು ಸಾಧ್ಯವಿಲ್ಲ ಎಂಬುದಕ್ಕೆ  ಜೋಡುಪಾಲಾ  ದುರಂತ  ಸಾಕ್ಷಿಯಾಗಿದೆ.





ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Hit And Run Case: ಅಮೆರಿಕದಲ್ಲಿ ಮುಂದಿನ ತಿಂಗಳು ಪದವಿ ಪಡೆಯಬೇಕಿದ್ದ ಗುಂಟೂರು ವಿದ್ಯಾರ್ಥಿನಿ ಸಾವು

ರಸ್ತೆ ಮಧ್ಯೆಯಲ್ಲಿ ಚೇರ್ ಮೇಲೆ ಕುಳಿತು ರೀಲ್ಸ್ ಹುಚ್ಚಾಟ ಮಾಡಿದವ ಅರೆಸ್ಟ್‌

Rahul Gandhi: ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ರಾಹುಲ್ ಗಾಂಧಿ ಪತ್ರ: ಯೆಸ್ ಬಾಸ್ ಎಂದ ಸಿದ್ದರಾಮಯ್ಯ

50 ಕೋಟಿ ಅಲ್ಲ ಲಕ್ಷಕ್ಕೂ ಬೆಲೆ ಬಾಳಲ್ಲ ಸತೀಶ್‌ ಖರೀದಿಸಿದ ನಾಯಿ, ED ದಾಳಿಯಲ್ಲಿ ಅಸಲಿಯತ್ತು ಬಯಲು

60ನೇ ವರ್ಷದಲ್ಲಿ ಹಸೆಮಣೆಯೇರಿದ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ದಿಲೀಪ್‌ ಘೋಷ್‌

ಮುಂದಿನ ಸುದ್ದಿ
Show comments