Select Your Language

Notifications

webdunia
webdunia
webdunia
webdunia

ಬಿಜೆಪಿ ಪಾಳಯದಲ್ಲಿ ಮತ್ತೆ ಬುಗಿಲೆದ್ದಿದೆ ಸವದಿ ಮತ್ಸರ

ಬಿಜೆಪಿ ಪಾಳಯದಲ್ಲಿ ಮತ್ತೆ ಬುಗಿಲೆದ್ದಿದೆ ಸವದಿ ಮತ್ಸರ
ಬೆಂಗಳೂರು , ಬುಧವಾರ, 28 ಆಗಸ್ಟ್ 2019 (11:18 IST)
ಬೆಂಗಳೂರು : ಬಿಜೆಪಿ ಪಾಳಯದಲ್ಲಿ ಲಕ್ಷ್ಮಣ್ ಸವದಿಗೆ ಡಿಸಿಎಂ ಪಟ್ಟ ಕೊಟ್ಟಿದ್ದಕ್ಕೆ ಶಾಸಕರು ಸಿಡಿಮಿಡಿಗೊಂಡಿದ್ದು, ಇನ್ನೂ ಸವದಿ ಮತ್ಸರ ಶಮನವಾಗಿಲ್ಲ ಎನ್ನಲಾಗಿದೆ.




ಬೆಳಗಾವಿ ಜಿಲ್ಲೆಯ ಬಹುತೇಕ ಶಾಸಕರಲ್ಲಿ ಅಸಮಾಧಾನದ ಹೊಗೆ ಎದ್ದಿದ್ದು,  ಅಸಮಾಧಾನಿತ ಶಾಸಕರಿಗೆ ಬಾಲಚಂದ್ರ  ಹಾಗೂ ಉಮೇಶ್ ಕತ್ತಿ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದೆ. 7 ಶಾಸಕರು ಸೇರಿದಂತೆ ಜಿಲ್ಲೆಯ ಪ್ರಭಾವಿ ನಾಯಕರು ಸಾಥ್ ನೀಡಿದ್ದು, ಪಕ್ಷದ ಮಟ್ಟದಲ್ಲಿ ಯಾವ ರೀತಿ ವಿರೋಧ ಮಾಡಬೇಕೆಂದು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.


ಅಲ್ಲದೇ  ಸವದಿ ವಿಚಾರವಾಗಿ ಮತದಾರರಿಗೆ ಹೇಗೆ ಉತ್ತರಿಸಬೇಕೆಂದು ಗೊಂದಲದಲ್ಲಿರುವ ಶಾಸಕರು, ಗೆದ್ದವರಿಗೆ ಸ್ಥಾನಮಾನವಿಲ್ಲ, ಸೋತವರಿಗೆ ಸ್ಥಾನ ನೀಡಿದ್ದಕ್ಕೆ ಸಿಡಿಮಿಡಿಗೊಂಡು ಬಾಲಚಂದ್ರ  ಹಾಗೂ ಉಮೇಶ್ ಕತ್ತಿ ಪರ ಬ್ಯಾಟಿಂಗ್ ಬೀಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನರ್ಹ ಶಾಸಕರ ಗೋಳು ಕೇಳಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಣ್ಣೀರು