Publish Date: Wed, 06 Apr 2022 (08:31 IST)
Updated Date: Wed, 06 Apr 2022 (08:53 IST)
ಬೆಂಗಳೂರು : ಒಂದು ಬಾರಿ ಅವಕಾಶ ಕೊಡಿ. ಐದು ವರ್ಷಗಳ ಸಂಪೂರ್ಣ ಅವಧಿಗೆ ನಮ್ಮನ್ನು ಆಯ್ಕೆ ಮಾಡಿ, ನೀರಾವರಿ ಯೋಜನೆಗಳನ್ನು ಸಂಪೂರ್ಣಗೊಳಿಸುತ್ತೇನೆ.
ಒಂದು ವೇಳೆ ಮಾತು ತಪ್ಪಿದರೆ ಜನತಾದಳ ವಿಸರ್ಜನೆ ಮಾಡುತ್ತೇನೆ ಅಂತಾ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಿದ್ದ ರೈತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರಾವರಿ ಯೋಜನೆಗಳನ್ನು ಐದು ವರ್ಷದಲ್ಲಿ ನಿಮಗೆ ನೀಡದೇ ಇದ್ದರೆ, ಈ ಪಕ್ಷವನ್ನೇ ನಾವು ವಿಸರ್ಜನೆ ಮಾಡ್ತೀವಿ. ಹನುಮ ಜಯಂತಿಯಂದು ಜಲಧಾರೆ ಕಾರ್ಯಕ್ರಮ ಆರಂಭ ಮಾಡುವುದಾಗಿ ಘೋಷಣೆ ಮಾಡಿದ್ರು.
ಕರ್ನಾಟಕದಲ್ಲಿ ಭೂ ಸುಧಾರಣಾ ಕಾಯ್ದೆ ತಂದಾಗ ಕುಮಾರಣ್ಣ ಸೈಲೆಂಟ್ ಆದ್ರು ಅಂದ್ರು. 79ಎ, 79ಬಿ ನಲ್ಲಿ ಮೌನಕ್ಕೆ ಶರಣಾದೆ ನಾನು, ನಾನು ನನ್ನ ವಿದ್ಯಾಭ್ಯಾಸ ಮುಗಿದ ನಂತರ 17 ಲಕ್ಷ ಸಾಲ ತೆಗೆದುಕೊಂಡು ಥಿಯೇಟರ್ ಕಟ್ಟಿದ್ವಿ. ಆಗ ನನ್ನ ತಂದೆ ಥಿಯೇಟರ್ ಓಪನ್ ದಿನ ಒಂದು ಮಾತು ಹೇಳಿದ್ರು.
ಥಿಯೇಟರ್ ನಿಮ್ಮ ಜೀವನ ಕಾಪಾಡಲ್ಲ ಈ ಭೂಮಿ ನಿಮ್ಮ ಜೀವನ ಕಾಪಾಡುತ್ತೆ ಅಂದ್ರು. ನಾನು ಈಗ ಕೇತಗಾನಳ್ಳಿಯಲ್ಲಿ ಭೂಮಿ ತೆಗೆದುಕೊಂಡು ಅಲ್ಲೇ ಇದ್ದೀನಿ. ಆ ಭೂಮಿಯನ್ನು ನಾವು ಅನಧಿಕೃತ ವಾಗಿ ಪಡೆದಿದ್ದು ಅಂತ ಹಿಂಸೆ ಕೊಟ್ರು. 79ಎ, 79ಬಿ ಯಿಂದಾಗಿ ನಾನು ಕೂಡ ಅನೇಕ ಕಷ್ಟ ಎದುರಿಸಿದೆ.