Select Your Language

Notifications

webdunia
webdunia
webdunia
webdunia

ವಿ.ಪ. ಚುನಾವಣೆ: 8 ಸಾವಿರ ಶಿಕ್ಷಕರೊಂದಿಗೆ ನಾಮಪತ್ರ ಸಲ್ಲಿಸಲು ಹೊರಟ ಹೊರಟ್ಟಿ

ವಿ.ಪ. ಚುನಾವಣೆ: 8 ಸಾವಿರ ಶಿಕ್ಷಕರೊಂದಿಗೆ ನಾಮಪತ್ರ ಸಲ್ಲಿಸಲು ಹೊರಟ ಹೊರಟ್ಟಿ
ಧಾರವಾಡ , ಸೋಮವಾರ, 23 ಮೇ 2016 (14:52 IST)
ಪಶ್ಚಿಮ ಪದವೀಧರ ಚುನಾವಣೆ ನಾಮಪತ್ರ ಸಲ್ಲಿಸಲು ಜೆಡಿಎಸ್ ಅಭ್ಯರ್ಥಿ ಬಸವರಾಜ ಹೊರಟ್ಟಿ 8000 ಸಾವಿರ ಶಿಕ್ಷಕರೊಂದಿಗೆ ಧಾರವಾಡದಿಂದ ಬೆಳಗಾವಿಗೆ ತೆರಳಿದರು.
 
ಬಸ್ಸ್ ಮತ್ತು ಟ್ರ್ಯಾಕ್ಸ್ ಮೂಲಕ 8000 ಶಿಕ್ಷಕರೊಂದಿಗೆ ಬಸವರಾಜ ಹೊರಟ್ಟಿಯವರು ಸಿಎನ್‌ಬಿ-5757 ಸಂಖ್ಯೆಯ ಬಿಳಿ ಅಂಬಾಸಿಡರ್ ಕಾರಿನಲ್ಲಿ ನಾಮಪತ್ರ ಸಲ್ಲಿಸಲು ತೆರಳಿದ್ದಾರೆ. ಕಳೆದ ಹಲವು ವರ್ಷಗಳಿಂದ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಇದೇ ಕಾರನ್ನು ಬಳಸುವ ಹೊರಟ್ಟಿ ಇದೊಂದು ಲಕ್ಕಿ ಕಾರ್ ಎಂದು  ಬಣ್ಣಿಸಿದ್ದಾರೆ.
 
ಪಶ್ಚಿಮ ಪದವೀಧರ ಚುನಾವಣೆಯಲ್ಲಿ ಸತತ ಆರು ಬಾರಿ ಗೆಲುವು ಸಾಧಿಸಿದ್ದೇನೆ. ಏಳನೇಯ ಬಾರಿಗೂ ನಾನೇ ಜಯಭೇರಿಯಾಗುತ್ತೇನೆ. ನನ್ನು ಕಾರ್ಯವೈಖರಿಯೇ ನನಗೆ ಶ್ರೀರಕ್ಷೆ ಎಂದು ಜೆಡಿಎಸ್ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮತ್ತೊಂದು ಮರ್ಯಾದೆ ಹತ್ಯೆ: ತಂದೆಯಿಂದಲೇ ಪುತ್ರಿಯ ಹತ್ಯೆ