ಜೆಡಿಎಸ್ ತೆಕ್ಕೆಗೆ ಮನ್ಮುಲ್ : ಬಿಜೆಪಿಗೆ ಭಾರೀ ಆಘಾತ

Webdunia
ಗುರುವಾರ, 3 ಅಕ್ಟೋಬರ್ 2019 (17:15 IST)
ಮಂಡ್ಯದ ಮನ್ಮುಲ್ ಅದೃಷ್ಟದ ಮೂಲಕ ಜೆಡಿಎಸ್ ಪಾಲಾಗಿದೆ. ಈ ಮೂಲಕ ಬಿಜೆಪಿಗೆ ಮುಖಭಂಗ ಆಗಿರೋದಲ್ಲದೇ
ಡಿಸಿಎಂ ಅಶ್ವತ್ ನಾರಾಯಣ, ಮಾಜಿ ಸಚಿವ ಚಲುವರಾಯಸ್ವಾಮಿಯ ಹಿನ್ನಡೆಗೆ ಕಾರಣವಾಗಿದೆ.

ಜೆಡಿಎಸ್ ಗೆ ಅಧಿಕಾರ ತಪ್ಪಿಸಲು ಕಸರತ್ತು ನಡೆಸಿದ್ದರು ಉಭಯ ನಾಯಕರು. ಆದರೆ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಜೆಡಿಎಸ್ ಪಾಲಾಗಿವೆ.

ಮಂಡ್ಯದ ಮನ್ಮುಲ್ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಜೆಡಿಎಸ್‌ಗೆ ಅದೃಷ್ಟ ಒಲಿದಿದೆ.
ಲಾಟರಿ ಮೂಲಕ‌ ಮನ್ ಮುಲ್‌ ಗದ್ದುಗೆ ಹಿಡಿದಿದೆ ಜೆಡಿಎಸ್. ಆ ಮೂಲಕ ಬಿಜೆಪಿಯ ಅಧಿಕಾರದ ಕನಸು ನುಚ್ಚುನೂರಾಗಿದೆ.

ಚಲಾವಣೆಯಾಗಿದ್ದ 16 ಮತಗಳಲ್ಲಿ 8 - 8 ಸಮಬಲ ಮತಗಳು ಉಭಯ ಪಕ್ಷಗಳ ಪಾಲಾಗಿದ್ದವು. ಸಮಬಲ ಸಾಧಿಸಿದ್ದ ಜೆಡಿಎಸ್-ಬಿಜೆಪಿ ಅಧ್ಯಕ್ಷ ಸ್ಥಾನದ ಸ್ಪರ್ಧಿಗಳಿಗೆ ಕುತೂಹಲ ಕಾದಿತ್ತು.

ಕೊನೆಗೆ ಲಾಟರಿ ಎತ್ತವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದವು ಜೆಡಿಎಸ್‌ನ ಬಿ.ಆರ್. ರಾಮಚಂದ್ರು.

ಬಿಜೆಪಿ ಹಿನ್ನಡೆಗೆ ಅಧಿಕಾರಿಯೊಬ್ಬರ ಕ್ರಾಸ್ ಓಟಿಂಗ್ ಶಂಕೆ ವ್ಯಕ್ತವಾಗಿದೆ. ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್‌ ಪಿ ಸ್ವಾಮಿಗೆ ಮುಖಭಂಗವಾಗಿದೆ. ಉಪಾಧ್ಯಕ್ಷ ಸ್ಥಾನವು ಜೆಡಿಎಸ್ ಗೆ ಒಲಿದಿದೆ. 9 ಮತ ಪಡೆದು ಉಪಾಧ್ಯಕ್ಷ ಗದ್ದುಗೆ ಏರಿದ್ದಾರೆ ರಘು ನಂದನ್.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ನಮ್ಮ ಬಾಸ್ ಖಮೇನಿ ಕೊಲ್ಲಲು ಹೇಳಿಕೊಟ್ಟಿದ್ದು ಮೋದಿಯೇ: ಭಾರತೀಯ ಬಾಲಕನ ಮಾತು ಕೇಳಿದ್ರೆ ಶಾಕ್ ಆಗ್ತೀರಿ Video

ಭಾರತದ ದಾಳಿಯಿಂದಲೇ ಇನ್ನೂ ಎದ್ದಿಲ್ಲ, ಆಗಲೇ ಅಫ್ಘಾನಿಸ್ತಾನದಿಂದಲೂ ಪಾಕಿಸ್ತಾನದ ವಾಯುನೆಲೆ ಮೇಲೆ ದಾಳಿ

ಇದೆಂಥಾ ಅಸಹ್ಯ.. ಸ್ವೀಟ್ ಖರೀದಿ ಮಾಡುವವರು ಈ ವಿಡಿಯೋ ತಪ್ಪದೇ ನೋಡಿ

ಗ್ಯಾರಂಟಿ ಯೋಜನೆ ನೀವೇ ಬೇಡ ಹೇಳಿ: ಸಚಿವ ಎಂಬಿ ಪಾಟೀಲ್ ರಿಕ್ವೆಸ್ಟ್

ಮುಂದಿನ ಸುದ್ದಿ
Show comments