Publish Date: Sat, 13 May 2023 (19:33 IST)
Updated Date: Sat, 13 May 2023 (19:33 IST)
ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಗೊಂದಲದ ಗೂಡಾಗಿದೆ.ಒಟ್ಟು ಮೂರು ಬಾರಿ ರೀ ಕೌಂಟಿಂಗ್ ನ್ನ ಅಧಿಕಾರಿಗಳು ಮಾಡಿದ್ದಾರೆ.
ಅಲ್ಲದೇ ಜಯನಗರ ವಿಧಾನಸಭಾ ಕ್ಷೇತ್ರ ಫಲಿತಾಂಶದ ಮರು ಎಣಿಕೆಯಲ್ಲೂ ಗೊಂದಲ ಉಂಟಾಗಿದ್ದು,ಒಮ್ಮೆ ಮುನ್ನಡೇ, ಮತ್ತೊಮ್ಮೆ ಹಿನ್ನಡೆ ಫಲಿತಾಂಶ ತೋರಿಸಿದ್ದು,ಎಣಿಕ ಕೇಂದ್ರದಲ್ಲೇ ಸೌಮ್ಯರೆಡ್ಡಿ ಕುಳಿತಿದ್ದಾರೆ.ಇನ್ನೂ ಗಾಬರಿಯಿಂದ ಮತ ಎಣಿಕ ಕೇಂದ್ರದೊಳಗೆ ರಾಮಲಿಂಗಾರೆಡ್ಡಿ ತೆರಳಿದ್ರು.
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ನಡೆದ ಮರು ಮತ ಎಣಿಕೆ ಯಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.17 ಮತಗಳಿಂದ ಮುನ್ನಡೆಯನ್ನ ಸಿ.ಕೆ. ರಾಮಮೂರ್ತಿ ಸಾಧಿಸಿದ್ದಾರೆ.ಸಿ. ಕೆ. ರಾಮಮೂರ್ತಿ ಮುನ್ನಡೆ ಸಾಧಿಸಿ ಗೆಲುವು ಪಡೆದಿದ್ದಾರೆ.