Select Your Language

Notifications

webdunia
webdunia
webdunia
webdunia

ಸಮಾಜ ಒಡೆಯುವ ಕೆಲಸ ನಮ್ಮದಲ್ಲ ಬಿಜೆಪಿಯದ್ದು: ಸಿಎಂ ವಾಗ್ದಾಳಿ

ಸಮಾಜ ಒಡೆಯುವ ಕೆಲಸ ನಮ್ಮದಲ್ಲ ಬಿಜೆಪಿಯದ್ದು: ಸಿಎಂ ವಾಗ್ದಾಳಿ
ಬೆಂಗಳೂರು , ಶನಿವಾರ, 29 ಜುಲೈ 2017 (14:09 IST)
ಸಮಾಜ ಒಡೆಯುವ ಕೆಲಸ ನಮ್ಮದಲ್ಲ ಬಿಜೆಪಿಯದ್ದು. ಸಮಾಜ ಜೋಡಿಸುವುದು ನಮ್ಮ ಕೆಲಸವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಲಿಂಗಾಯುತ ಪ್ರತ್ಯೇಕ ಧರ್ಮ ವಿಚಾರಕ್ಕಾಗಿ ಯಾವುದೇ ಸಚಿವರನ್ನು ನೇಮಿಸಿಲ್ಲ. ಐವರು ಸಚಿವರನ್ನು ನೇಮಿಸಲಾಗಿದೆ ಎನ್ನುವ ಬಿಜೆಪಿ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ಲಿಂಗಾಯುತರು ಮತ್ತು ವೀರಶೈವರು ಒಂದಾಗಿ ಬಂದು ಪ್ರತ್ಯೇಕ ಲಿಂಗಾಯುತ ಧರ್ಮಕ್ಕಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಿದರೆ ಪರಿಶೀಲಿಸುತ್ತೇನೆ ಎಂದು ಹೇಳಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
 
ಪ್ರತ್ಯೇಕ ಲಿಂಗಾಯುತ ಧರ್ಮ ಸ್ಥಾಪನೆಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿಯ 53 ಶಾಸಕರು ಸಹಿ ಹಾಕಿರುವುದು ಬಿಜೆಪಿ ಮುಖಂಡರು ಮರೆತಂತಿದೆ ಎಂದು ಟಾಂಗ್ ನೀಡಿದ್ದಾರೆ.
 
ನಮ್ಮದೇನಿದ್ದರೂ ಜೋಡಿಸುವ ಕೆಲಸ ಒಡೆಯುವ ಕೆಲಸವಲ್ಲ. ಸಮಾಜವನ್ನು ಒಡೆಯುವುದು ಬಿಜೆಪಿಯ ಸಂಸ್ಕ್ರತಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗೆಳತನದ ನೆಪ: ತಾಯಿ, ಮಗಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ ಪೇದೆ