Select Your Language

Notifications

webdunia
webdunia
webdunia
webdunia

ಗ್ಯಾರಂಟಿ ಘೋಷಿಸಿದ್ದು ಸಂತೋಷ, ಇದರಿಂದ ಕರ್ನಾಟಕ ದಿವಾಳಿಯಾಗದಿರಲಿ : ಸಿ.ಟಿ ರವಿ

ಗ್ಯಾರಂಟಿ ಘೋಷಿಸಿದ್ದು ಸಂತೋಷ, ಇದರಿಂದ ಕರ್ನಾಟಕ ದಿವಾಳಿಯಾಗದಿರಲಿ : ಸಿ.ಟಿ ರವಿ
ಬೆಂಗಳೂರು , ಶನಿವಾರ, 3 ಜೂನ್ 2023 (13:48 IST)
ಬೆಂಗಳೂರು : ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಘೋಷಣೆ ಮಾಡಿರುವುದನ್ನ ನಾನು ಸ್ವಾಗತ ಮಾಡುತ್ತೇನೆ. ಆದ್ರೆ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗದಿರಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
 
ಕಾಂಗ್ರೆಸ್ ಗ್ಯಾರಂಟಿ ಜಾರಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ತಮ್ಮ ಪ್ರಣಾಳಿಕೆಯಲ್ಲಿ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡ್ತೀವಿ ಅಂತಾ ಹೇಳಿದ್ದಾರೆ. ಜಮೀರ್ ಅಹ್ಮದ್ ಖಾನ್ ಅವರೂ ಇತ್ತೀಚೆಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ ಮನೆಯಲ್ಲಿ 7 ಜನ ಇದ್ದರೆ, 70 ಕೆ.ಜಿ ಅಕ್ಕಿ ಸಿಗುತ್ತೆ ಅಂತಾ ಹೇಳಿದ್ದಾರೆ. ಆದ್ರೆ ಈಗ ಒಂದು ಕುಟುಂಬಕ್ಕೆ 10 ಕೆಜಿ ಅಕ್ಕಿ ಅಂತಾ ಹೇಳ್ತಿದ್ದಾರೆ, ಇದನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ವೆನಿಜುವೆಲಾ ಎನ್ನುವ ರಾಷ್ಟ್ರದ ಇತಿಹಾಸ ನಮ್ಮ ಕಣ್ಣಮುಂದೆ ಇದೆ. ಅಲ್ಲಿಯೂ ಇದೇ ರೀತಿ ಕೊಡುತ್ತಾ ರಾಷ್ಟ್ರವೇ ದಿವಾಳಿ ಆಗಿಹೋಯ್ತು. ಅದೇ ರೀತಿ ನಮ್ಮ ರಾಜ್ಯ ದಿವಾಳಿಯಾಗಬಾರದು. ತಾವು ಬುದ್ಧಿವಂತರಿದ್ದೀರಿ, ಹಣ ಜೋಡಿಸುವ ಸಾಮರ್ಥ್ಯವಿದೆ, ಅನುಭವ ಇದೆ. ಮೊದಲು ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸಿ ಎಂದು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಲಿನ ಪ್ರೋತ್ಸಾಹ ಧನ 1.50 ರೂ. ಕಡಿತ