Select Your Language

Notifications

webdunia
webdunia
webdunia
webdunia

ಹಾರ್ನ್​​ ಕಿರಿಕಿರಿ; ಚಾಲಕನಿಗೆ ಚಾಕು ಇರಿತ

ಹಾರ್ನ್​​ ಕಿರಿಕಿರಿ; ಚಾಲಕನಿಗೆ ಚಾಕು ಇರಿತ
ತುಮಕೂರು , ಸೋಮವಾರ, 28 ನವೆಂಬರ್ 2022 (21:03 IST)
ಹಾರ್ನ್​​​ ಕಿರಿಕಿರಿ ಅಂತಾ ಕಾರು ಚಾಲಕನಿಗೆ ಚಾಕು ಇರಿದಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೈರೇನಹಳ್ಳಿಯಲ್ಲಿ ನಡೆದಿದೆ. ಬೈರೇನಹಳ್ಳಿಯಲ್ಲಿ ನಿನ್ನೆ ಸಂಜೆ ಬೆಂಗಳೂರು ಮೂಲದ ಹೇಮಂತ್ ಎಂಬಾತ ಕಾರಿನಲ್ಲಿ ಹೋಗುವಾಗ ಹಾರ್ನ್​​ ಮಾಡಿ ಜಾಗ ಕೇಳಿದ್ದಕ್ಕೆ ಏಕಾಏಕಿ ಕಾರು ಅಡ್ಡಗಟ್ಟಿ ದ್ವಿಚಕ್ರ ವಾಹನದ ಯುವಕರು ಡ್ಯಾಗರ್​​​​​​ನಿಂದ ಹಲ್ಲೆ ಮಾಡಿದ್ದಾರೆ. ಸ್ಥಳೀಯರು ಹೇಮಂತ್ ನನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಾಲ್ಕೈದು ಕಡೆ ಡ್ಯಾಗರ್​​​​ನಿಂದ ದುಷ್ಕರ್ಮಿಗಳು ಚುಚ್ಚಿದ್ದು, ಹೇಮಂತ್​​​ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಈ ಪ್ರಕರಣ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ತವ್ಯ ಲೋಪ; ಕಾನ್ಸ್​​ಟೇಬಲ್ ಅಮಾನತು