Select Your Language

Notifications

webdunia
webdunia
webdunia
webdunia

ಕರ್ತವ್ಯ ಲೋಪ; ಕಾನ್ಸ್​​ಟೇಬಲ್ ಅಮಾನತು

ಕರ್ತವ್ಯ ಲೋಪ; ಕಾನ್ಸ್​​ಟೇಬಲ್ ಅಮಾನತು
ಮಂಡ್ಯ , ಸೋಮವಾರ, 28 ನವೆಂಬರ್ 2022 (21:00 IST)
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ ದೊಡ್ಡಿ ಪೊಲಿಸ್ ಠಾಣೆಯಲ್ಲಿ ರೌಡಿ ಶೀಟರ್ ಅರುಣ್ ಅಲಿಯಾಸ್ ಕಪ್ಪೆ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಕಾನ್ಸ್​​​ಟೇಬಲ್ ಕರ್ತವ್ಯ ಲೋಪ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ದೊಡ್ಡರಸಿನಕೆರೆ ಬೀಟ್ ಕಾನ್ಸ್​​​​​ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚೇತನ್ ಗಲಾಟೆ ನಡೆದ ದಿನ ಮಾಹಿತಿ ಕಲೆ ಹಾಕದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ ವಹಿಸಿದ್ದಾರೆ. ಆರೋಪಿಗಳು ಮನೆ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಇದಕ್ಕೆ ನೇರ ಹೊಣೆ ಕರ್ತವ್ಯ ಲೋಪವೆಸಗಿದ್ದ ಬೀಟ್ ಕಾನ್ಸ್​​​​ಟೇಬಲ್ ಚೇತನ್ ಆಗಿದ್ದರಿಂದ ಚೇತನ್ ಅವರನ್ನ ಅಮಾನತು ಮಾಡಲಾಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ಯುವತಿ ಮತಾಂತರಕ್ಕೆ ಯತ್ನ?