Webdunia - Bharat's app for daily news and videos

Install App

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಐಪಿಎಸ್ ಅಧಿಕಾರಿ ಡಿ. ರೂಪ ಆರೋಪ

Webdunia
ಭಾನುವಾರ, 19 ಫೆಬ್ರವರಿ 2023 (18:01 IST)
ಇಂದು ಸುದ್ದಿಗೋಷ್ಟಿ ನಡೆಸಿದ ಐ ಪಿ ಎಸ್ ಅಧಿಕಾರಿ ಡಿ.ರೂಪ ನೀವು ಏನು ಕೇಳಬೇಡಿ ನಾನೇ ಎಲ್ಲಾ ಹೇಳ್ತೀನಿ.ನಾನು ಹೇಳಿದ್ದು ಪೂರ್ತಿ ತೋರಿಸಿ.ನಾನು ಏನನ್ನು ನಾಚಿಕೆ ಮಾಡಿಕೊಂಡಿಲ್ಲ.ಇವರು ಯಾಕೆ ಸಂಧಾನಕ್ಕೆ ಹೋದ್ರು.ಯಾಕೆ ಹೋಗಬೇಕಿತ್ತು.ನಾನು ಯಾರ ಜೊತೆಗು ಸಂಧಾನಕ್ಕೆ ಹೋಗಿಲ್ಲ.ಇದೇ ಮೊದಲು ಐಎಎಸ್ ಅಧಿಕಾರಿ ಈ ರೀತಿ ಮಾಡಿರೋದು ಅಂತಾ ರೋಹಿಣಿ ಸಿಂಧೂರಿ ವಿರುದ್ಧ ರೂಪ ಆರೋಪ ಮಾಡಿದ್ದಾರೆ.
 
ನಾನು ಎಲ್ಲಾ ವಿಚಾರ ಹೇಳಿದ್ದೀನಿ.ನಾನು ಅವರಿಗೆ ತುಂಬಾ ಹೆಲ್ಪ್  ಮಾಡಿಕೊಟ್ಟಿದ್ದೀವಿ.ಡಿ.ಕೆ ರವಿಯವರ ವಿಚಾರದಲ್ಲಿಯು ಸಹ ನಾನು ಮಾತನಾಡಿದ್ದೆ.ಅವರು ಅವತ್ತೆ ಕಟ್ ಮಾಡಬೇಕಿತ್ತು.ಅವರು ಅವತ್ತೇ ಎಡವಿದ್ರು, ಅವತ್ತು ಹೇಳಿದ್ದೆ ಇವತ್ತು ಹೇಳಿದ್ದೀನಿ.
 
ಇದೀಗ ಯಾಕೆ ಈ ವಿಚಾರ ಆ ಪಿಕ್ಸ್ ಗಳನ್ನು ಈಗ ಯಾಕೆ ಹಾಕಿದ್ದೀರ ಅಂತ ಕೇಳ್ಬೇಡಿ.ನಾನು ಅದನ್ನು ಸರ್ಕಾರಕ್ಕೆ ಕೊಡ್ತೀನಿ.ಇಂತಹ ಪಿಕ್ಸ್ ಗಳನ್ನು ಓರ್ವ ಐಎಎಸ್ ಅಧಿಕಾರಿ ಪುರುಷ ಅಧಿಕಾರಿಗೆ ಕಳಿಸುತ್ತಾರೆ ಅಂದರೆ ಏನು ಅರ್ಥ.ಇದಕ್ಕೆ ಸರ್ಕಾರದ ಮಟ್ಟದಲ್ಲಿ ನಾನು ಕೊಡ್ತೀನಿ.ಅದು ಸಹ ತನಿಖೆ ಆಗಲಿ.ಸರ್ವಿಸ್ ಕಂಡಕ್ಟ್ ಆ್ಯಕ್ಟ್ ಇರತ್ತೆ.ಕೋವಿಡ್ ಟೈಂನಲ್ಲಿ ಸ್ವಿಮಿಂಗ್ ಪೂಲ್ ಮಾಡಿಕೊಂಡ್ರು.ಇದು ಏನು ಅರ್ಥ ಸೂಚಿಸತ್ತೆ.ಆ ಸಂದರ್ಭದಲ್ಲಿ ಇದೆಲ್ಲಾ ಬೇಕಿತ್ತಾ..?ಯಾರು ಇವರಿಗೆ ಅಷ್ಟೋಂದು ಸಪೋರ್ಟ್ ಮಾಡ್ತಾಯಿದ್ದಾರೆ ಗೊತ್ತಿಲ್ಲ.ಯಾಕೆ ಶಿಕ್ಷೆ ಆಗುತ್ತಿಲ್ಲ, ಇವರ ಹಿಂದೆ ಯಾರಿದ್ದಾರೆ ನನಗೆ ಗೊತ್ತಿಲ್ಲ.ಈ ವಿಚಾರದಲ್ಲಿ ಪರ್ಸನಲ್ ಏನು ಇಲ್ಲ.
 
ಫೋಟೋ ಒನ್ ಟು ಒನ್ ಕಳಿಸಿದ್ತಾರೆ ಅಂದ್ರೆ ಏನು ಅರ್ಥ.ಇದರ ಮೊಟೀವ್ ಏನು.ಅದಕ್ಕೆ‌ ಎಂಎಲ್ಎ ಬಳಿಯಲ್ಲಿ ಸಂಧಾನಕ್ಕೆ ಹೋದ್ರಾ.?ಏನನ್ನು ಮುಚ್ಚಿಡ್ತಾಯಿದ್ದಾರೆ ಇವರು.ನನಗೆ ಗೊತ್ತಾಯ್ತು ಈಗ ಹೀಗಾಗಿ ನಾನು ಈಗ ಕೊಟ್ಟಿದ್ದೀನಿ ಅಂತಾ ರೂಪ ರೋಹಿಣಿ ಸಿಂಧೂರಿ ಮೇಲೆ ಆರೋಪಗಳ ಸುರಿಮಳೆಗೈದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಸಾಲು ಪ್ರತಿಭಟನೆ ಬೆನ್ನಲ್ಲೇ ದೊಡ್ಡ ಮಟ್ಟದ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ

ಆರ್ಯಭಟ್ಟರು ಸೊನ್ನೆಯಿಂದ ಇತಿಹಾಸ ನಿರ್ಮಿಸಿದರು: ಪ್ರಧಾನಿ ಮೋದಿ

ಲಕ್ಷ್ಮೀ ಹೆಬ್ಬಾಳಕರ, ರಾಜ್ಯಪಾಲರ ಸಹಿ ನಕಲು ಮಾಡಿ ಲಕ್ಷಾಂತರ ವಂಚನೆ: ಬಿಗ್ ಅಪ್ಡೇಟ್ ನೀಡಿದ ಎಸ್‌ಪಿ

ಲಾಲ್‌ ಬಾಗ್‌, ಕಬ್ಬನ್ ಪಾರ್ಕ್‌ನಂತಹ ಇನ್ನಷ್ಟು ಉದ್ಯಾನವನಗಳ ಅಗತ್ಯವಿದೆ: ಈಶ್ವರ್ ಖಂಡ್ರೆ

ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ವರದಿ ಬಿಡುಗಡೆಗೆ ಬಿಜೆಪಿ ಆಗ್ರಹ

ಮುಂದಿನ ಸುದ್ದಿ
Show comments