Publish Date: Sat, 14 Aug 2021 (23:18 IST)
Updated Date: Sat, 14 Aug 2021 (23:21 IST)
ನಾಳೆ 75 ನೇ ಸ್ವಾತಂತ್ರ ದಿನಾಚರಣೆ ಅಂಗವಾಗಿ ಇಂದು ನಗರದ ಕೆಲವುಕಡೆ ಇಂದು ಸಂಜೆಯಿಂದಲೇ ರಸ್ತೆ ನಿರ್ಬಂದ ಮಾಡಲಾಗಿತ್ತು.ನಗರದ ಪ್ರಮುಖ ರಸ್ತೆಗಳಲ್ಲಿ ನಾಳೆ ಸಂಚಾರಕ್ಕೆ ಆಸ್ಪದವಿಲ್ಲ.ಅದ್ಯಾವ ರಸ್ತೆಗಳು ಡೀಟೆಲ್ಸ್ ಇಲ್ಲಿದೆ ನೋಡಿ.
ನಾಳೆ ಬೆಳಿಗ್ಗೆ ನಗರದ ಮಾಣಿಕ್ ಪೆರಡ್ ಷಾ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ರಾಷ್ಟ್ರೀಯ ದ್ವಜರೋಹಣ ಮಾಡಲಿದ್ದು.ನಾಡಿಗೆ ಸಂದೇಶ ನೀಡಲಿದ್ದಾರೆ.ಆ ನಿಟ್ಟಿನಲ್ಲಿ ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂದಿಸಲಾಗಿತ್ತು.
ಸೆಂಟ್ರಲ್ ರಸ್ತೆ.ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರಬಸ್ ನಿಲ್ದಾಣದವರೆಗೆ .ಕಬ್ಬನ್ ರಸ್ತೆಜಂಕ್ಷನ್.ವರೆಗೆ ಎಂ.ಜಿ.ರಸ್ತೆ. ಯಿಂದ ಕ್ವೀನ್ಸ್ ರಸ್ತೆಯವರೆಗೆ ಬ್ಯಾರಿಕೇಟ್ ಹಾಕಲಾಯಿತು. ಪೋಲಿಸ್ ತುಕಡಿಗಳು ತಾಲೀಮ್ ನಡೆಸಿದ್ದವು.
ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವಾದ ಇಂದು ರಸ್ತೆಯ ಇಕ್ಕೆಲ್ಲಗಳಲ್ಲಿ ದ್ವಜ ಮಾರಾಟ ಜೋರಾಗಿ ನಡೆದಿತ್ತು.ಬಿ.ಬಿ.ಎಂ.ಪಿ ಯ ಕಚೇರಿ ಆವರಣದಲ್ಲಿ ದ್ವಜರೋಹಣಕ್ಕೆ ಸಿದ್ದತೆ ನಡೆಯಿತು. ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ನ ಪ್ರತಿಮೆ ಯನ್ನು ಸ್ಷಚ್ವಗೊಳಿಸುವ ಕಾರ್ಯ ನಡೆಯಿತು.
ನಾಳೆ ಸ್ವಾತಂತ್ರ್ಯ ದಿನಾಚರಣೆ ಯ ಅಂಗವಾಗಿ ನಗರದಲ್ಲೆಡೆ ತ್ರಿವರ್ಣ ದ್ವಜಗಳು.ತೋರಣಗಳು ರಾರಾಜಿಸುತ್ತಿತ್ತು.ಕರೊನ ದ ಛಾಯೆ 75 ನೇವರ್ಷದ ಸ್ವಾತಂತ್ರ್ಯ ಸಂಭ್ರಮವನ್ನು ಕಸಿದಿರುವುದು ತಿಳಿದುಬಂತು.