Webdunia - Bharat's app for daily news and videos

Install App

ಮಕ್ಕಳಲ್ಲಿ ಹೆಚ್ಚಾಯ್ತು ಕೆಮ್ಮು , ವೈರಲ್ ಫೀವರ್

Webdunia
ಶುಕ್ರವಾರ, 17 ಸೆಪ್ಟಂಬರ್ 2021 (20:45 IST)
ರಾಜಧಾನಿಯಲ್ಲಿ ಮೂರನೇ ಅಲೆಯ ಆತಂಕ ಶುರುವಾಗಿದೆ. ಮಕ್ಕಳಲ್ಲಿ ವೈರಲ್ ಜ್ವರ , ಕೆಮ್ಮು ಪ್ರಕರಣಗಳು ಹೆಚ್ಚಿಗೆ ಕಾಣಿಸಿಕೊಳ್ತಿದಿಯಂತೆ,ರಾಜ್ಯಾದ್ಯಂತ ಮಕ್ಕಳಲ್ಲಿ ವೈರಲ್ ಜ್ವರ ಪ್ರಕರಣಗಳು  ಹೆಚ್ಚಳವಾಗಿದೆ. ಮೂರನೇ ಅಲೆಯ ಸಮೀಪಿಸುತ್ತಿದ್ದಂತೆ ಮಕ್ಕಳಿಗೆ ಫ್ಲೂ ಜ್ವರ ಸೇರಿದಂತೆ ಇನ್ಫೇಕ್ಷನ್ ಕಂಡುಬರುತ್ತಿದೆ. ಈ ಸೀಸನ್ ನಲ್ಲಿ ಮಕ್ಕಳಲ್ಲಿ ರೋಗ ಲಕ್ಷಣಗಳು ಹೆಚ್ಚಿಗೆ ಕಂಡುಬರುತ್ತಿದೆ. ಮೂರನೇ ಅಲೆ ಹೆಚ್ಚು ಅಪಾಯವಾಗಿದ್ದು, ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸ್ವೀಂಟಮ್ಸ್ ಕಂಡುಬಂದರೆ ಟೆಸ್ಟ್ ಮಾಡಲಾಗುತ್ತೆ. ಅಷ್ಟೇ ಅಲ್ಲದೇ ಪ್ರತಿ ಶಾಲೆಗೆ ಒಂದರಂತೆ ನೋಡಲ್ ಆಫೀಸ್ ರನ್ನ ನೇಮಕ ಮಾಡಲಾಗುತ್ತೆ. 100 ಟೆಸ್ಟ್ ಮಾಡಿದ್ರೆ ಆದರಲ್ಲಿ 10 ಸ್ಯಾಂಪಲ್ ಮಕ್ಕಳದ್ದೇ ಇರುತ್ತೆ..ಈಗಾಗಲೇ 8% ರಷ್ಟು ಟೆಸ್ಟ್ ಮಾಡಲಾಗ್ತಿದೆ.ಆದಷ್ಟು ಶೀಘ್ರದಲ್ಲಿ ಇನ್ನೇರಡು ಪರ್ಸೆಂಟ್ ಟೆಸ್ಟ್ ಹೆಚ್ಚಿಸಲಾಗುತ್ತೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಧಿಕಾರಿ ವಿಜಯೇಂದ್ರ ಹೇಳಿದ್ದಾರೆ.
 
ಮೂರನೇ ಅಲೆಯ ವರದಿ ಹಿಂದಿ ಬಂದಿದೆ.ರಾಜ್ಯಾದ್ಯಂತ ಮಕ್ಕಳಲ್ಲಿ ವೈರಲ್ ಜ್ವರ ಹೆಚ್ಚಾಗಿದೆ. ಈಗ ಚಟುವಟಿಕೆಗಳು ಆರಂಭವಾಗಿರುವುದರಿಂದ ಸೀಸನ್ ಫ್ಲ್ಯೂ ಬಂದಿದೆ. ಕಳೆದ ಬಾರಿ ಲಾಕ್ ಡೌನ್ ಇದ್ದಿದ್ರಿಂದ ಶಾಲೆ ಇರಲಿಲ್ಲ, ಮಕ್ಕಳು ಮನೆಯೊಳಗೆ ಇದ್ರು ಸೇಫ್ ಆಗಿದ್ರು. ಈಗ ಆರೋಗ್ಯ ಇಲಾಖೆಯಿಂದ  ಮಕ್ಕಳನ್ನ ಸೂಕ್ಷ್ಮವಾಗಿ ಟೆಸ್ಟ್ ಮಾಡಲಾಗ್ತಿದೆ. ಕೊರೋನಾ ಟೆಸ್ಟ್ ಕೂಡ ಮಾಡ್ತಿದೇವೆ. ಎಲ್ಲಾ ಮಕ್ಕಳಿಗೂ ಒಳ್ಳೆಯ ಟ್ರೀಟ್ ಮೆಂಟ್ ಸಿಗಬೇಕು, ಮಕ್ಕಳ ಬೆಡ್ ಸಮಸ್ಯೆ ಗಮನಕ್ಕೆ ಬಂದಿದೆ . ಬಗೆಹರಿಸುವ ಪ್ರಯತ್ನ ಮಾಡುತ್ತೇವೆ . ಅಷ್ಟೇ ಅಲ್ಲದೇ ವೈದ್ಯಕೀಯವಾಗಿ ಹೇಳಯವುದಾದ್ರೆ ಸಣ್ಣಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ರು.ಒಟ್ನಲಿ‌ ಸರ್ಕಾರ ಬಿಬಿಎಂಪಿಯನ್ನ ತರಾಟೆಗೆ ತೆಗೆದುಕೊಂಡು ಸೂಚನೆ ನೀಡಿದೆ. ಹೀಗಾಗಿ ಮೂರನೇ ಅಲೆ ಹೆಚ್ಚಾಗಿ ಮಕ್ಕಳಿಗೆ ಉಲ್ಬಣಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರ ಬಿಬಿಎಂಪಿ ಮುಂದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಸಮೀಕ್ಷೆ ಪ್ರಶ್ನೆ ಕೇಳುವಾಗ ಡಿಕೆ ಶಿವಕುಮಾರ್ ಗರಂ: ಪ್ರಶ್ನೆ ತಯಾರಿಸಿದ್ದು ಯಾರು ಎಂದ ನೆಟ್ಟಿಗರು

ಬೈಕ್ ಗಿಂತ ಕಾರಿನ ಎಂಜಿನ್ ಯಾಕೆ ಭಾರ; ರಾಹುಲ್ ಗಾಂಧಿ ತಲೆಗೆ ನೊಬೆಲ್ ಪ್ರೈಸ್ ಕೊಡ್ಬೇಕು ಎಂದ ಪಬ್ಲಿಕ್

ಹಮಾಸ್‌ಗೆ ಗಡುವು ನೀಡಿದ ಟ್ರಂಪ್‌: ಒಪ್ಪಂದ ತಿರಸ್ಕರಿಸಿದರೆ ನರಕದರ್ಶನ ಎಂದು ದೊಡ್ಡಣ್ಣ ವಾರ್ನಿಂಗ್‌

ಬಿಜೆಪಿಯವರಿಗೆ ನಮ್ಮ ಗ್ಯಾರಂಟಿ ಯೋಜನೆಗಳ ಯಶಸ್ಸು ನಿದ್ದೆಗೆಡಿಸಿದೆ: ಸಿಎಂ ಸಿದ್ದರಾಮಯ್ಯ

ಗೋಡಂಬಿ ಅತಿಯಾಗಿ ತಿನ್ನುತ್ತೀರಾ ಹಾಗಿದ್ದರೆ ಇದನ್ನು ಓದಿ

ಮುಂದಿನ ಸುದ್ದಿ
Show comments