Select Your Language

Notifications

webdunia
webdunia
webdunia
webdunia

ಐಎಂಎ ವಂಚನೆ ಪ್ರಕರಣ; ವಂಚಕ ಮನ್ಸೂರ್ ಅಲಿ ಖಾನ್ ಗೆ ಸಚಿವ ಜಮೀರ್ ಅಹ್ಮದ್ ರಿಂದ ಸಂದೇಶ

ಐಎಂಎ ವಂಚನೆ ಪ್ರಕರಣ; ವಂಚಕ ಮನ್ಸೂರ್ ಅಲಿ ಖಾನ್ ಗೆ ಸಚಿವ ಜಮೀರ್ ಅಹ್ಮದ್ ರಿಂದ ಸಂದೇಶ
ಬೆಂಗಳೂರು , ಬುಧವಾರ, 12 ಜೂನ್ 2019 (11:49 IST)
ಬೆಂಗಳೂರು : ಹೂಡಿಕೆದಾರರಿಗೆ ಬೆಂಗಳೂರಿನ ಶಿವಾಜಿನಗರದ ಐಎಂಎ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಂಚನೆ ಮಾಡಿದ ಮನ್ಸೂರ್ ಅಲಿ ಖಾನ್ ಗೆ ಸಚಿವ ಜಮೀರ್ ಅಹ್ಮದ್ ಖಾನ್ ಸಂದೇಶವೊಂದನ್ನು ನೀಡಿದ್ದಾರೆ.




“ಮನ್ಸೂರ್ ಅಲಿ ಖಾನ್ ಎಲ್ಲಿದ್ದೀರಾ ಬನ್ನಿ. ಬಡವರ ಹಣ ವಾಪಾಸ್ ನೀಡಿ ಪುಣ್ಯ ಕಟ್ಕೋಳ್ಳಿ, ನಾನು ಸರ್ಕಾರ ನಿಮ್ಮ ಜೊತೆಗಿದ್ದೇವೆ, ಯಾರಿಗೂ ಹೆದರಬೇಡಿ. ನಿಮ್ಮ ಮಾತಿನಲ್ಲಿ ಸತ್ಯ ಇದ್ದರೆ ಬನ್ನಿ ಕೂತು ಮಾತಾಡೋಣ. ನಿಮ್ಮ ಕೈಯಿಂದ ಯಾರು ಹಣ ತಗೊಂಡಿದ್ದಾರೆ ಅಂತಾ ಹೇಳಿ. ಯಾವ ಅಧಿಕಾರಿಗಳಿಗೆ , ಯಾವ ರಾಜಕಾರಣಿಗಳಿಗೆ ಹಣ ನೀಡಿದ್ದೀರಿ? ಎಲ್ಲಾ ಮಾಹಿತಿಯನ್ನು ಭಯವಿಲ್ಲದೆ ಹೇಳಿ. ವಾಪಸ್ ಪಡೆಯೋಣ” ಎಂದು ಸಚಿವ ಜಮೀರ್ ಅಹ್ಮದ್ ಖಾನ್, ಮನ್ಸೂರ್ ಅಲಿ ಖಾನ್ ಗೆ ಸಂದೇಶ ನೀಡಿದ್ದಾರೆ.


ಶಿವಾಜಿನಗರದ ಐಎಂಎ ವಂಚನೆ ಪ್ರಕರಣದಲ್ಲಿ ಸಾವಿರಾರೂ ಕೊಟಿ ರೂ. ವಂಚನೆ ಮಾಡಿ ಮನ್ಸೂರ್ ಅಲಿ ಖಾನ್ ನಾಪತ್ತೆಯಾಗಿದ್ದು, ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್ ಐಟಿಗೆ ವಹಿಸಿದೆ. ಅಲ್ಲದೇ ಮನ್ಸೂರ್ ಅಲಿ ಖಾನ್ ಜತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನಂಟು ಇದೆ ಎನ್ನುವ ಸ್ಫೋಟ ಮಾಹಿತಿ ಬೆಳಕಿಗೆ ಬಂದಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ದಲಿತ ವ್ಯಕ್ತಿಯ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣ; ಟ್ವೀಟರ್ ನಲ್ಲಿ ಕಿಡಿಕಾರಿದ ಸಿಎಂ