Select Your Language

Notifications

webdunia
webdunia
webdunia
webdunia

ಅನಧಿಕೃತ ಶೆಡ್​ ತೆರವುಗೊಳಿಸಿದ ಬಿಬಿಎಂಪಿ

ಅನಧಿಕೃತ ಶೆಡ್​ ತೆರವುಗೊಳಿಸಿದ ಬಿಬಿಎಂಪಿ
bengaluru , ಸೋಮವಾರ, 12 ಜುಲೈ 2021 (16:39 IST)
ಇಂದು ಸಿಲಿಕಾನ್ ಸಿಟಿಯ ಕೊಡಿಗೆಹಳ್ಳಿಯಲ್ಲಿ ಅನಧಿಕೃತವಾದ ಶೆಡ್ ಗಳನ್ನ ತೆರವು ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದನ್ವಯ ಬೀದಿಬದಿ ಇದ್ದಾಂತ ಅನಧಿಕೃತ ಅಂಗಡಿ- ಮುಂಗಟ್ಟುಗಳ ತೆರವು ಮಾಡಲಾಗಿತ್ತು.
ಖುದ್ದು ಬಿಬಿಎಂಪಿ ಎ ಡಬ್ಲೂ ಇ ಅಧಿಕಾರಿ ಶ್ರೀನಿವಾಸ್ ಮೂರ್ತಿ ಸ್ಥಳಕ್ಕೆ ಆಗಮಿಸಿ ತೆರವು ಕಾರ್ಯಚಾರಣೆ ಮಾಡಿದ್ರು. ಇನ್ನು ಅಧಿಕಾರಿಗಳು ತೆರವು ಮಾಡುತ್ತಿದಂತೆ  ಬಡಜನರ ಆಕ್ರಂದನ ಮುಗಿಲು ಮುಟ್ಟಿತ್ತು.
ಸುಮಾರು ವರ್ಷಗಳಿಂದ ಇದ್ದಾದ ಅಂಗಡಿಯ ನಿವಾಸಿಗಳು ಅಂಗಡಿ ತೆರವು ಮಾಡಬೇಡಿ ಎಂದು ಪರಪರಿಯಾಗಿ ಬೇಡಿಕೊಂಡ್ರು ಅಧಿಕಾರಿಗಳು ಮಾತ್ರ ಯಾವುದಕ್ಕೂ ಕೇರ್ ಮಾಡದೇ ತಮ್ಮ ಕೆಲಸವನ್ನ ಮಾಡುತ್ತಿದ್ರು.
ಇನ್ನು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಸ್ಥಳೀಯ ನಿವಾಸಿಗಳು ಹಿಡಿಶಾಪ ಹಾಕಿದ್ರು.ಇನ್ನೂ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ಬೀದಿಬದಿ ವ್ಯಾಪಾರಿಗಳು ತಮ್ಮ ಆಳಲನ್ನ ಎಳೆ ಎಳೆಯಾಗಿ ತೋಡಿಕೊಂಡ್ರು

Share this Story:

Follow Webdunia kannada

ಮುಂದಿನ ಸುದ್ದಿ

2030ರಲ್ಲಿ ಹೊಸ ಶಿಕ್ಷಣ ನೀತಿ ಜಾರಿ: ಡಿಸಿಎಂ ಅಶ್ವರ್ತ ನಾರಾಯಣ