Select Your Language

Notifications

webdunia
webdunia
webdunia
webdunia

ನಾವು ಗೋಮಾಂಸ ತಿಂದಿದ್ದೇ ಸರಿ, ಪ್ರಶ್ನಿಸಲು ನೀವು ಯಾರು?: ಪ್ರೊ. ಮಹೇಶ್‌ಚಂದ್ರ ತಿರುಗೇಟು

ನಾವು ಗೋಮಾಂಸ ತಿಂದಿದ್ದೇ ಸರಿ, ಪ್ರಶ್ನಿಸಲು ನೀವು ಯಾರು?: ಪ್ರೊ. ಮಹೇಶ್‌ಚಂದ್ರ ತಿರುಗೇಟು
ಮೈಸೂರು , ಸೋಮವಾರ, 26 ಜೂನ್ 2017 (15:31 IST)
ಗೋಮಾಂಸವನ್ನು ಸಂವಿಧಾನದಲ್ಲಿ ನಿಷೇಧಿಸಿಲ್ಲವಾದ್ದರಿಂದ ನಾವು ತಿಂದಿದ್ದೇ ಸರಿ. ಅದನ್ನು ಪ್ರಶ್ನಿಸಲು ನೀವು ಯಾರು ಎಂದು ಖ್ಯಾತ ಸಾಹಿತಿ ಪ್ರೊ.ಮಹೇಶ್‌ಚಂದ್ರ ಗುರು ತಿರುಗೇಟು ನೀಡಿದ್ದಾರೆ.
 
ಮೈಸೂರಿನ ಕಲಾಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗೋಮಾಂಸ ಸೇವಿಸುವ ವಿವಾದ ಕುರಿತಂತೆ ಹೇಳಿಕೆ ನೀಡಿದ ಅವರು ನಿನ್ನೆ ಗೋಮಾಂಸ ತಿಂದಿದ್ದೇನೆ, ಇಂದು ತಿನ್ನುತ್ತೇನೆ, ನಾಳೆಯೂ ತಿನ್ನುತ್ತೇವೆ. ಅದನ್ನು ಕೇಳಲು ನೀವು ಯಾರು ಎಂದು ಗುಡುಗಿದ್ದಾರೆ.
 
ಪ್ರೊ.ಭಗವಾನ್ ಮತ್ತು ಪ್ರೊ.ಮಹೇಶ್‌ಚಂದ್ರಗುರು ಸಮಾಜಕ್ಕೆ ಕಳಂಕ ಎಂದು ಬಿಜೆಪಿ ಸಂಸದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಗೋಮಾಂಸವನ್ನು ಸಂವಿಧಾನದಲ್ಲಿ ನಿಷೇಧಿಸಿಲ್ಲ ಎನ್ನುವುದನ್ನು ಸಂಸದರು ಅರಿತುಕೊಂಡಲ್ಲಿ ಒಳ್ಳೆಯದು ಎಂದು ಕಿಡಿಕಾರಿದ್ದಾರೆ.
 
ಕೇಂದ್ರ ಸರಕಾರದಿಂದ ಬಹುಜನರ ಆಹಾರ ಪದ್ದತಿ ಆಕ್ರಮಣವಾಗುತ್ತಿದೆ. ಆಹಾರ ಪದ್ದತಿಯನ್ನು ಪ್ರಶ್ನಿಸಲು ಯಾರಿಗೂ ಹಕ್ಕಿಲ್ಲ. ಇದರ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖವಾಗಿದೆ ಎಂದು ಪ್ರೊಫೆಸರ್ ಮಹೇಶ್‌ಚಂದ್ರಗುರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ.
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜನರ ಮನಸ್ಸು, ಸಮಾಜದ ಸ್ವಾಸ್ಥ ಕದಡಬೇಡಿ: ಪೇಜಾವರ ಶ್ರೀ ಮನವಿ