Select Your Language

Notifications

webdunia
webdunia
webdunia
webdunia

ಜನರ ಮನಸ್ಸು, ಸಮಾಜದ ಸ್ವಾಸ್ಥ ಕದಡಬೇಡಿ: ಪೇಜಾವರ ಶ್ರೀ ಮನವಿ

ಜನರ ಮನಸ್ಸು, ಸಮಾಜದ ಸ್ವಾಸ್ಥ ಕದಡಬೇಡಿ: ಪೇಜಾವರ ಶ್ರೀ ಮನವಿ
ಉಡುಪಿ , ಸೋಮವಾರ, 26 ಜೂನ್ 2017 (14:13 IST)
ಹಿಂದು ಧರ್ಮ ಏನು ಎನ್ನುವುದು ನಿಮಗಿಂತಲೂ ನನಗೆ ಚೆನ್ನಾಗಿ ಗೊತ್ತು ಎಂದು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ಗೆ ತಿರುಗೇಟು ನೀಡಿದ್ದಾರೆ
 
ಕೃಷ್ಣಮಠದಲ್ಲಿ ಇಫ್ತಾರ್‌ಕೂಟ ಆಯೋಜಿಸಿರುವುದುಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಮುತಾಲಿಕ್, ಮುಸ್ಲಿಮರು ತಮ್ಮ ಮಸೀದಿಯೊಳಗೆ ಗಣೇಶ್ ಹಬ್ಬವನ್ನು ಆಚರಿಸಲು ಬಿಡ್ತಾರಾ ಎಂದು 
 
ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಬಗ್ಗೆ ನಾನು ಚೆನ್ನಾಗಿ ತಿಳಿದುಕೊಂಡಿರುವುದಾಗಿ ಭಾವಿಸಿದ್ದೇನೆ. ದಯವಿಟ್ಟು ಸಮುದಾಯಗಳ ಮನಸ್ಸು ಕದಡಬೇಡಿ ಎಂದು ಮನವಿ ಮಾಡಿದ್ದಾರೆ.
 
ಮಧ್ವಾಚಾರ್ಯರ ಕಾಲದಿಂದಲೂ ಮುಸ್ಲಿಂ ಸಮುದಾಯದೊಂದಿಗೆ ಉತ್ತಮ ಭಾಂಧವ್ಯವಿದೆ. ಇದೊಂದು ಸಹಜ ಕಾರ್ಯಕ್ರಮ ದೊಡ್ಡ ವಿಷಯ ಮಾಡುವುದಲ್ಲ. ಹಿಂದು ಧರ್ಮಕ್ಕೆ ಯಾವುದೇ ಹಾನಿ ಮಾಡಿಲ್ಲ ಎಂದು ತಿಳಿಸಿದ್ದಾರೆ.  
 
ಉಡುಪಿಯ ಶ್ರೀಕೃಷ್ಣ ಮಠದ ಒಳಗೆ ನಮಾಜು ಮಾಡಿಲ್ಲ. ಸಾರ್ವಜನಿಕ ಭೋಜನ ಶಾಲೆಯಲ್ಲಿ ನಮಾಜು ಮಾಡಲಾಗಿದೆ ಮುಸ್ಲಿಮರೊಂದಿಗೆ ಮಠದ ಉತ್ತಮ ಭಾಂದವ್ಯ ಶತ ಶತಮಾನಗಳಿಂದಲೂ ಬಂದಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ.
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮಿರ ಪ್ರತ್ಯೇಕತಾವಾದಿಗಳಿಗೆ ಇರಾನ್ ಬೆಂಬಲ: ಭಾರತಕ್ಕೆ ಆಘಾತ