Select Your Language

Notifications

webdunia
webdunia
webdunia
webdunia

ರಸ್ತೆ, ರಸ್ತೆಗಳಲ್ಲಿ ಸಿಎಂ, ಸಚಿವರ ಮಾನ ಹರಾಜು ಹಾಕ್ತೇನೆ: ಯಡ್ಡಿ ಗುಡುಗು

ರಸ್ತೆ, ರಸ್ತೆಗಳಲ್ಲಿ ಸಿಎಂ, ಸಚಿವರ ಮಾನ ಹರಾಜು ಹಾಕ್ತೇನೆ: ಯಡ್ಡಿ ಗುಡುಗು
ಹುಬ್ಬಳ್ಳಿ , ಶುಕ್ರವಾರ, 3 ಮಾರ್ಚ್ 2017 (18:04 IST)
ಮುಂದಿನ ಕೆಲವೇ ದಿನಗಳಲ್ಲಿ ರಸ್ತೆ, ರಸ್ತೆಗಳಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಸಚಿವರ ಮಾನ ಹರಾಜು ಹಾಕುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
 
ದಾಖಲೆಗಳಿಲ್ಲದೇ ಈ ಯಡಿಯೂರಪ್ಪ ಯಾವತ್ತೂ ಆರೋಪ ಮಾಡಲ್ಲ. ನಾನು ಮಾಡುವ ಪ್ರತಿಯೊಂದು ಆರೋಪಗಳಿಗೂ ದಾಖಲೆಗಳಿವೆ ಎಂದು ಗುಡುಗಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ. ಬೆದರಿಕೆಯೊಡ್ಡಿ ರಾಜಕಾರಣ ಮಾಡುವುದು ಸಿಎಂ ಸಿದ್ದರಾಮಯ್ಯ ಗುಣವಾಗಿದೆ. ಆದರೆ, ಇಂತಹ ಗೊಡ್ಡು ಬೆದರಿಕೆಗಳಿಗೆ ಯಡಿಯೂರಪ್ಪ ಹೆದರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ಡೈರಿ ಕೇಸ್ ಬಗ್ಗೆ ಸಿಬಿಐಯಲ್ಲಿ ಕೇಸ್ ದಾಖಲಾದ್ರೆ ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಆವಾಗ ರಾಜೀನಾಮೆ ಕೊಟ್ಟು ಹೋಗುತ್ತಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಯಾವಾಗ ಬೇಕಾದರೂ ಬರಬಹುದು ಎಂದು ತಿಳಿಸಿದ್ದಾರೆ.
 
ಡೈರಿ ಕೇಸ್ ಮತ್ತು ಸ್ಟೀಲ್ ಬ್ರಿಡ್ಜ್ ಯೋಜನೆ ಸ್ಥಗಿತಗೊಳಿಸಿ ಭ್ರಷ್ಟಾಚಾರದಿಂದ ಪಾರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಪಟಾಲಂ ಭಾವಿಸುತ್ತಿದೆ. ಆದರೆ, ಸಿದ್ದರಾಮಯ್ಯ ವಿರುದ್ಧದ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಾಣಿಸದೆ ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಬ್ಬರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯ ಹೋರಾಟ, ಆರೋಪಗಳಿಂದ ಸ್ಟೀಲ್ ಬ್ರಿಡ್ಜ್ ಕೈ ಬಿಟ್ಟಿಲ್ಲ: ಕಾಂಗ್ರೆಸ್