Select Your Language

Notifications

webdunia
webdunia
webdunia
webdunia

ನಾನೇ ಉಪ ಮುಖ್ಯಮಂತ್ರಿಯಾಗುವೆ ಎಂದ ಶ್ರೀರಾಮುಲು – ಬಿಜೆಪಿಯಲ್ಲಿ ಒಡಕು?

ನಾನೇ ಉಪ ಮುಖ್ಯಮಂತ್ರಿಯಾಗುವೆ ಎಂದ ಶ್ರೀರಾಮುಲು – ಬಿಜೆಪಿಯಲ್ಲಿ ಒಡಕು?
ಚಿತ್ರದುರ್ಗ , ಮಂಗಳವಾರ, 7 ಜನವರಿ 2020 (15:34 IST)
ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೊಸ ಬಾಂಬ್ ಸಿಡಿಸಿದ್ದು, ರಾಜ್ಯ ಬಿಜೆಪಿಯಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ.

ಬಿ.ಶ್ರೀರಾಮುಲು  ಮೊಳಕಾಲ್ಮೂರಿನಲ್ಲಿ ಹೇಳಿಕೆ ನೀಡಿದ್ದು, ನೆರೆಹಾವಳಿ ಸಂತ್ರಸ್ತರಿಗೆ  ಕೇಂದ್ರ ಸರಕಾರ ಸಾವಿರದ ಎಂಟುನೂರು ಐವತ್ತು ಕೋಟಿ ಹಣ ಬಿಡುಗಡೆ ಮಾಡಿದೆ.

ಕಾಂಗ್ರೆಸ್  ನಾಯಕರು ಸುಳ್ಳು ಹೇಳಿ ಜನರನ್ನು ಹಾದಿ ತಪ್ಪಿಸಲು ಸಾಧ್ಯವಿಲ್ಲ ಅಂತ ಕಾಂಗ್ರೆಸ್ ನವರ ಆರೋಪಗಳಿಗೆ ಟಾಂಗ್ ನೀಡಿದ್ರು.

ಜನರ ಅಪೇಕ್ಷೆ ನಾನು ಉಪ ಮುಖ್ಯಮಂತ್ರಿಯಾಗಬೇಕು ಅಂತಾ ಇದೆ. ಆದರೆ ಬಿಜೆಪಿ ಮುಖಂಡರ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿಲ್ಲ ಎಂದರು.

ನಾನೊಬ್ಬ ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ತತ್ವ, ಸಿದ್ಧಾಂತದಡಿ ಕೆಲಸ ಮಾಡುವೆ ಅಂತ ಹೇಳಿದ್ರು.  



Share this Story:

Follow Webdunia kannada

ಮುಂದಿನ ಸುದ್ದಿ

ಸಂಪೂರ್ಣ ಬಟ್ಟೆ ಬಿಚ್ಚಿದ ಯುವತಿ - 2 ದಿನದಲ್ಲೇ 5 ಕೋಟಿ ಸಂಪಾದನೆ