ದರ್ಶನ್ ಹಲ್ಲೆ ಮಾಡಿರುವ ಸಾಕ್ಷ್ಯ ಇದೆ: ಇಂದ್ರಜೀತ್ ಲಂಕೇಶ್

Webdunia
ಗುರುವಾರ, 15 ಜುಲೈ 2021 (17:01 IST)

ಮೈಸೂರಿನಲ್ಲಿ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹೋಟೆಲ್ ನಲ್ಲಿ ಸಿಬ್ಬಂದಿಗೆ ಹಲ್ಲೆ ಮಾಡಿರುವುದನ್ನು ಸಾಬೀತುಪಡಿಸಿ ಎಂದು ನಟ ದರ್ಶನ್ ಸವಾಲು ಹಾಕಿದ ಬೆನ್ನಲ್ಲೇ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ನನ್ನ ಬಳಿ ಸಾಕ್ಷ್ಯಾಧಾರಗಳಿವೆ. ದರ್ಶನ್ ಕೇವಲ ಒಂದು ಬಾರಿ ಅಲ್ಲ ಹಲವಾರು ಬಾರಿ ಹಲ್ಲೆ ಮಾಡಿರುವ ಉದಾಹರಣೆಗಳು ನಮ್ಮ ಬಳಿ ಇವೆ ಎಂದರು.

ಸಂದೇಶ್ ನಾಗರಾಜ್ ಮೊದಲು ಗಲಾಟೆ ಆಗಿಲ್ಲ ಅಂದರು. ಆಮೇಲೆ ಆಗಿದೆ. ಆದರೆ ಹಲ್ಲೆ ಆಗಿಲ್ಲ, ಬೈದಿದ್ದು ನಿಜ ಅಂತಾರೆ. ನಿಯಮದ ಪ್ರಕಾರ 60 ದಿನದ ಸಿಸಿಟಿವಿ ದೃಶ್ಯಾವಳಿ ಸಂಗ್ರಹ ಇರಬೇಕು. ಆದರೆ 10 ದಿನದ್ದು ಮಾತ್ರ ಇದೆ ಅಂತಾರೆ. ಹಲ್ಲೆ ಆಗಿರುವುದಕ್ಕೆ ಸಾಕ್ಷ್ಯ ಇದೆ. ಹಲ್ಲೆ ಆಗಿರುವುದು ಹಿಂದಿಯವನು ಅಲ್ಲ. ಕರ್ನಾಟಕದವನೇ. ಆತನ ಹೆಸರು ಗಂಗಾಧರ ಎಂದು ವಿವರಿಸಿದರು.

ಸಂದೇಶ್ ನಾಗರಾಜ್ ಹೋಟೆಲ್ ನಲ್ಲಿ ಮಾತ್ರವಲ್ಲ, ಕ್ಲಬ್ ನಲ್ಲಿ ಹಾಗೂ ತೋಟದ ಸೆಕ್ಯೂರಿಟಿ ಗಾರ್ಡ್ ಮೇಲೆ ಕೂಡ ಹಲ್ಲೆಗಳಾಗಿವೆ. ಒಬ್ಬಾತ ಈಗಲೂ ಕೋಮಾದಲ್ಲಿದ್ದಾರೆ. ಸೆಲೆಬ್ರೆಟಿ ಆಗಿ ಏನೂ ಮಾಡಿದರೂ ತಡೆಯುತ್ತೆ ಅಂದುಕೊಂಡಿದ್ದಾರೆ. ನಿಮ್ಮ ಪಾಳೆಗಾರಿಕೆ ಕರ್ನಾಟಕದಲ್ಲಿ ನಡೆಯೋಲ್ಲ. ತಪ್ಪು ಮಾಡಿದ್ದರೆ ತಪ್ಪಾಗಿದೆ ಎಂದು ಒಪ್ಪಿಕೊಳ್ಳಿ ಎಂದು ಇಂದ್ರಜೀತ್ ಲಂಕೇಶ್ ಆಗ್ರಹಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿ ಸಂಸತ್ ನಲ್ಲಿ ನೀಟ್ ಅಕ್ರಮ ಚರ್ಚೆ ಮಾಡಲು ನೋಟಿಸ್ ಕೂಡಾ ಕೊಡದೇ ಪ್ರತಿಭಟನೆ ಮಾಡ್ತಿದ್ದಾರೆ: ಜಿತೇಂದ್ರ ಸಿಂಗ್

ಸಿಜೆಪಿ ಪ್ರತಿಭಟನೆ ವೇಳೆ ತಲ್ವಾರ್ ಝಳಪಿಸಿದ್ರಾ: ವೈರಲ್ ವಿಡಿಯೋದಲ್ಲಿ ಏನಿದೆ

ಮೋದಿಗೆ ಶೂಟ್ ಮಾಡ್ತೀನಿ, ಬಾಯಿಗೆ... ಸಿಜೆಪಿ ಪ್ರತಿಭಟನೆಯಲ್ಲಿ ಯುವಕನ ಅಸಭ್ಯ ಆವಾಜ್: Video

ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಪ್ರಮುಖ ವಿಧೇಯಕಗಳು ಮತ್ತು ವಿಪಕ್ಷಗಳ ಪ್ರತಿಭಟನೆಯಿಂದಾಗುವ ಪರಿಣಾಮಗಳು

Karnataka Weather: ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ ನೋಡಿ

ಮುಂದಿನ ಸುದ್ದಿ
Show comments