Select Your Language

Notifications

webdunia
webdunia
webdunia
webdunia

ನಾನು ಉಪಚುನಾವಣೆಯ ಮಾಸ್ಟರ್ ಎಂದ ಸಚಿವ

ನಾನು ಉಪಚುನಾವಣೆಯ ಮಾಸ್ಟರ್ ಎಂದ ಸಚಿವ
ಬೆಂಗಳೂರು , ಶನಿವಾರ, 7 ಡಿಸೆಂಬರ್ 2019 (11:26 IST)
ಬೆಂಗಳೂರು: ನಾನು ಉಪಚುನಾವಣೆಯ ಮಾಸ್ಟರ್ ಎಂದು ವಸತಿ ಇಲಾಖೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.



ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ವಿ.ಸೋಮಣ್ಣ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜನ ಸೋಲು ಗೆಲುವಿಗಿಂತ ಸ್ಥಿರತೆ , ಅಸ್ಥಿರತೆ ಬಗ್ಗೆ ಯೋಚಿಸಿದ್ದಾರೆ. ಬಿಜೆಪಿ ಸರ್ಕಾರವನ್ನು ಮುಂದುವರಿಸುವುದೇ ಜನರ ಉದ್ದೇಶ ಎಂದು ಹೇಳಿದ್ದಾರೆ.


ಹಾಗೇ ಉಪಚುನಾವಣೆಯಲ್ಲಿ ಬಿಜೆಪಿ 12 ರಂದ 13 ಸ್ಥಾನ ಗೆಲ್ಲುತ್ತದೆ. ಸೋತವರಿಗೆ ಸಚಿವ ಸ್ಥಾನದ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ, ಆದ್ರೆ ಸಿಎಂ ಬಿಎಸ್ ವೈ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಚ್ಚೇಗೌಡರ ವಿರುದ್ಧ ಸಿಎಂಗೆ ದೂರು ನೀಡಿದ ಎಂಟಿಬಿ ನಾಗರಾಜ್