Select Your Language

Notifications

webdunia
webdunia
webdunia
webdunia

ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಬದ್ಧ: ಸಿಎಂ

ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಬದ್ಧ: ಸಿಎಂ
ಬೆಂಗಳೂರು , ಮಂಗಳವಾರ, 11 ಏಪ್ರಿಲ್ 2017 (16:21 IST)
ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡಲು ನಾನು ಸಿದ್ದ. ಆದರೆ, ಅಲ್ಲಿರುವ ಪುರುಷ ಶಾಸಕರ ಮನವೊಲಿಸುವ ಕಾರ್ಯವನ್ನು ಮಹಿಳೆಯರು ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸದಾ ಮಹಿಳೆಯರ ಪರ. ಇಬ್ಬರು ಸಚಿವರಿಗೆ ಸ್ಥಾನ ನೀಡಲು ಸಿದ್ದವಾಗಿದ್ದೇನೆ. ಆದರೆ, ಮಹಿಳಾ ಶಾಸಕರು ಇತರ ಶಾಸಕರ ಮನವೊಲಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಮಹಿಳೆಯರು ಅಕ್ಷರಭ್ಯಾಸ ಮಾಡುವ ಸ್ಥಿತಿಯಲ್ಲಿರದ ಸಂದರ್ಭದಲ್ಲಿ 850 ವರ್ಷಗಳ ಹಿಂದೆ ಅಕ್ಕಮಹಾದೇವಿ ಅಕ್ಷರಭ್ಯಾಸ ಮಾಡಿದ್ದರು. ಅವರು ಅದು ಹೇಗೆ ಅಕ್ಷರಭ್ಯಾಸ ಮಾಡಿದ್ದರು ಎನ್ನುವ ಬಗ್ಗೆ ಸಂಶೋಧನೆಯಾಗಬೇಕು ಎಂದರು.
 
 
ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಬೇಕು. ಮಹಿಳೆಯರು ಸಬಲರಾಗಬೇಕು ಎನ್ನುವುದೇ ಸರಕಾರದ ಬಯಕೆಯಾಗಿದೆ. ಆದ್ದರಿಂದ, ಮತ್ತಷ್ಟು ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರಿಗೆ 2 ಸಚಿವ ಸ್ಥಾನ ನೀಡಲು ಸಿದ್ಧ: ಸಿಎಂ ಸಿದ್ದರಾಮಯ್ಯ