Select Your Language

Notifications

webdunia
webdunia
webdunia
webdunia

ನಾನು ಯಾವುದೇ ರೀತಿಯ ಸಭೆಯಲ್ಲಿ ಭಾಗಿಯಾಗಿಲ್ಲ-ನಿರಾಣಿ ಸ್ಪಷ್ಟನೆ

ನಾನು ಯಾವುದೇ ರೀತಿಯ ಸಭೆಯಲ್ಲಿ ಭಾಗಿಯಾಗಿಲ್ಲ-ನಿರಾಣಿ ಸ್ಪಷ್ಟನೆ
ಬೆಂಗಳೂರು , ಶುಕ್ರವಾರ, 29 ಮೇ 2020 (10:00 IST)
ಬೆಂಗಳೂರು : ಉತ್ತರ ಕರ್ನಾಟಕದ ಭಾಗದ ಬಿಜೆಪಿ ಶಾಸಕರ ಸಭೆ ವಿಚಾರ ನಾನು ಯಾವುದೇ ರೀತಿಯ ಸಭೆಯಲ್ಲಿ ಭಾಗಿಯಾಗಿಲ್ಲ ಎಂದು ಮುರಗೇಶ್ ನಿರಾಣಿ ಸ್ಪಷ್ಟನೆ ನೀಡಿದ್ದಾರೆ.


ಬಿಜೆಪಿ ನಾಯಕರಾದ ಉಮೇಶ್ ಕತ್ತಿ, ಮುರಗೇಶ್ ನಿರಾಣಿ ಮತ್ತು ಬಸನಗೌಡ ಪಾಟೀಲ್  ಸಿಎಂ ವಿರುದ್ಧ ಸಂಚು ರೂಪಿಸಿ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಮುರಗೇಶ್ ನಿರಾಣಿ, ನಾನು ಯಾವುದೇ ರೀತಿಯ ಸಭೆಯಲ್ಲಿ ಭಾಗಿಯಾಗಿಲ್ಲ ಪರಿಷತ್ ಸ್ಥಾನದ ವಿಚಾರವಾಗಿ ಭೇಟಿಯಾಗಿ ಚರ್ಚೆ ಮಾಡಿರುವುದಾಗಿ ಹೇಳಿದ್ದಾರೆ.


ಹಾಗೇ ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ಕೊಟ್ಟರೆ ಒಳ್ಳೆಯದು. ನನಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ನಾನು ಪಕ್ಷದ ಕಟ್ಟಾಳು, ಈಗ ಸಚಿವ ಸ್ಥಾನ ಸಿಗದಿರಬಹುದು.  ಮುಂದೆ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ಅವರು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಲ್ಲಿ ಬಂಡಾಯ; ಇಂದು 11 ಗಂಟೆಗೆ ತುರ್ತು ಸಭೆ ಕರೆದ ಸಿಎಂ