Select Your Language

Notifications

webdunia
webdunia
webdunia
webdunia

ನಾನು ಮಹಾಕಾಳಿಯ ಆರಾಧಕಿ; ಯಾರೊಂದಿಗೂ ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಎಂದವಳಾರು?

ನಾನು ಮಹಾಕಾಳಿಯ ಆರಾಧಕಿ; ಯಾರೊಂದಿಗೂ ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಎಂದವಳಾರು?
ಹುಬ್ಬಳ್ಳಿ , ಸೋಮವಾರ, 17 ಡಿಸೆಂಬರ್ 2018 (14:16 IST)
ನಾನು ಶ್ರೀ ಮಾತೆ ಮಹಾಕಾಳಿ ದೇವಿಯ ಆರಾಧಕಿ ಹಾಗೂ ನಾನೊಬ್ಬಳು ಕಟ್ಟಾ ಸನ್ಯಾಸಿನಿ. ಆದರೆ ಇತ್ತೀಚಿಗೆ ಕೆಲವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಮಾಜಿ ಸಚಿವ  ವಿನಯ ಕುಲಕರ್ಣಿ ಹಾಗೂ ಮುರುಘಾಮಠದ ಶಿವಯೋಗಿ ಸ್ವಾಮಿಗಳ ಜೊತೆ ಅನೈತಿಕ ಸಂಬಂಧ ಇದೆ ಎಂಬುದು ಶುದ್ಧ ಸುಳ್ಳು ಎಂದು ಕರ್ನಾಟಕ ಕೃಷಿಕ ಮತ್ತು ಕೃಷಿ ಕೂಲಿ ಕಾರ್ಮಿಕ ಹಿತರಕ್ಷಣಾ ಸಮಿತಿಯ ಸಂಚಾಲಕರಾದ ವಿಜಯಲಕ್ಷ್ಮಿ ಸುಳ್ಳೋಳ್ಳಿ ಹೇಳಿದರು.

ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲಿಯೇ ನಾನು ಸಂನ್ಯಾಸವನ್ನು ಹೊಂದಿದ್ದು, ಮಹಾಕಾಳಿಯನ್ನು ಆರಾಧನೆ ಮಾಡುತ್ತಾ ಬಂದಿದ್ದೇನೆ.  ಆದರೆ ಕೆಲ ಕಿಡಿಗೇಡಿಗಳು ನನ್ನ ಬಗ್ಗೆ ಕರಪತ್ರ ಹಂಚುತ್ತಿದ್ದಾರೆ. ಶಿವಯೋಗಿ ಸ್ವಾಮಿಗಳು ನನ್ನ ತಂದೆಯ ಸಮಾನರು. ನಾನು ಯಾರೊಂದಿಗೂ ಅನೈತಿಕ ಸಂಬಂಧವನ್ನು ಹೊಂದಿಲ್ಲ.

ನಾನು ನನ್ನ ಬುದ್ದಿಮಾಂದ್ಯ ತಮ್ಮ ಹಾಗೂ ಸಾಕು ಮಗಳೊಡನೆ ಜೀವನ ಸಾಗಿಸುತ್ತಿದ್ದೇನೆ ಹೊರತು ಅವರು ನನ್ನ ಮಕ್ಕಳಲ್ಲ. ಆದರೆ ಕೆಲವರು ತಮ್ಮ ಹಾಗೂ ಸಾಕು ಮಗಳನ್ನೇ ನನ್ನ ಹಾಗೂ ಶಿವಯೋಗಿ ಸ್ವಾಮೀಜಿಯ ಮಕ್ಕಳು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ಇದರಿಂದ ನನಗೆ ಮಾನಸಿಕ ಹಿಂಸೆ   ಆಗುತ್ತಿದೆ. ಹೀಗಾಗಿ ನನಗೆ ನ್ಯಾಯ ಒದಗಿಸಬೇಕು ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

26ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಚಾಲನೆ