Webdunia - Bharat's app for daily news and videos

Install App

ನಾನು ಅಪ್ಪಟ ಕಾಂಗ್ರೆಸ್ಸಿಗ ಎಂದ ಸಚಿವ

Webdunia
ಮಂಗಳವಾರ, 18 ಸೆಪ್ಟಂಬರ್ 2018 (16:16 IST)
ನನ್ನ ಕಣ ಕಣದಲ್ಲೂ ಕಾಂಗ್ರೆಸ್ ಇದೆ. ನಾನು ಅಪ್ಪಟ ಕಾಂಗ್ರೆಸ್ಸಿಗ. ಪಕ್ಷ ಬಿಡುವ ಪ್ರಶ್ನೆ ಇಲ್ಲ ಸಚಿವ ಹೇಳಿದ್ದಾರೆ.

ಅಧಿಕಾರದ ದಾಹ ನನಗಿಲ್ಲ, ಕಾಂಗ್ರೆಸ್ ಬಿಡುವ ಪ್ರಶ್ನೆ ಇಲ್ಲ. ಕಾಂಗ್ರೆಸ್ ಗೆ ಸಿದ್ಧಾಂತವಿದೆ, ಹೈಕಮಾಂಡ್ ಇದೆ.  ಸಿದ್ದರಾಮಯ್ಯ ಇದ್ದಾರೆ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

ಬಿಜೆಪಿಯವರು ಮೂವತ್ತು ಜನರು ರಾಜಿನಾಮೆ ನೀಡುತ್ತಾರೆಂದು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನ ಯಾವ ಎಂಎಲ್ ಎನೂ ಕೂಡ ರಾಜಿನಾಮೆ ನೀಡುವುದಿಲ್ಲ. ಚುನಾವಣಾ ಪೂರ್ವದಲ್ಲಿ ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದರು. ಆದರೆ ಈಗ ಯಾರು ಸಂಪರ್ಕಿಸಿಲ್ಲ ಎಂದರು.

ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತೆ. ಸರ್ಕಾರ ರಚನೆಯಾಗಿ ಮೂರುವರೆ ತಿಂಗಳಾಗಿದೆ ಅಷ್ಟೆ, ಕೆಲವರಿಗೆ ಸಚಿವ ಸ್ಥಾನ ಸಿಕ್ಕಿದೆ, ಕೆಲವರಿಗೆ ಸಿಕ್ಕಿಲ್ಲ ಹಾಗಾಗಿ ಕೆಲವರಿಗೆ ಅಸಮಧಾನವಿದೆ. ಸಮನ್ವಯ ಸಮಿತಿಯಲ್ಲಿ ಸಮಸ್ಯೆಗಳನ್ನ ಸಿದ್ದರಾಮಯ್ಯ ಬಗೆ ಹರಿಸಲಿದ್ದಾರೆ ಎಂದಿದ್ದಾರೆ.

ಹನೂರು ಶಾಸಕ ನರೇಂದ್ರರವರಿಗೆ ಸಚಿವ ಸ್ಥಾನ ನೀಡಿದರೆ ನನ್ನ ಅಭ್ಯಂತರವಿಲ್ಲ, ಅವರು ಮೂರು ಬಾರಿ ಗೆದ್ದಿದ್ದಾರೆ.
ನಾನು ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ಡಿ.ಕೆ. ಶಿವಕುಮಾರ್ ಹಿರಿಯರಿದ್ದಾರೆ, ಇಡಿ ನೋಟಿಸ್ ನೀಡಿರುವುದು ನನಗೆ ಗೊತ್ತಿಲ್ಲ ಎಂದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

B Dayanand: ಬಿ ದಯಾನಂದ್ ಎಷ್ಟು ಕರ್ತವ್ಯ ನಿಷ್ಠರು ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ

ಬಿಜೆಪಿ ನಾಯಕರಿಗೆ ಎರಡು ನಾಲಿಗೆ, ಗಳಿಗೆಗೊಂದು ಬಣ್ಣ: ಸಿಎಂ ಸಿದ್ದರಾಮಯ್ಯ

Indore murder: ಖತರ್ನಾಕ್ ಸೋನಮ್ ರಘುವಂಶಿ ಲವ್ವರ್ ಫೋಟೋ ರಿವೀಲ್: ಇವನಿಗಾಗಿ ಇಷ್ಟೆಲ್ಲಾ ಮಾಡಿದ್ಳಾ

ಒಂದೇ ದಿನ ವಿಮಾನ ಹತ್ತುವ ವೇಳೆ ಎಡವಿದ ಡೊನಾಲ್ಡ್‌ ಟ್ರಂಪ್‌, ಮಾರ್ಕೊ ರುಬಿಯೋ: ಇಲ್ಲೇನೋ ಸಮಸ್ಯೆ ಇದೆ ಎಂದ ನೆಟ್ಟಿಗರು

Indore Murder case: ಗಂಡನನ್ನು ಕೊಂದ ಆರು ಮಂದಿ ಖತರ್ನಾಕ್ ಪತ್ನಿಯರು ಇವರೇ

ಮುಂದಿನ ಸುದ್ದಿ
Show comments