Select Your Language

Notifications

webdunia
webdunia
webdunia
webdunia

ರಾಜಧಾನಿಯ ರೋಡ್ ನಲ್ಲಿ ಹೈಡ್ರಾಮಾ: ನಿಷೇಧಾಜ್ಞೆ

ರಾಜಧಾನಿಯ ರೋಡ್ ನಲ್ಲಿ ಹೈಡ್ರಾಮಾ: ನಿಷೇಧಾಜ್ಞೆ
ಬೆಂಗಳೂರು , ಮಂಗಳವಾರ, 23 ಜುಲೈ 2019 (18:09 IST)
ರಾಜ್ಯ ಸರಕಾರ ವಿಶ್ವಾಸ ಮತ ಯಾಚನೆ ಮಂಡಿಸುತ್ತಿರೋ ನಡುವೆಯೇ ಪಕ್ಷೇತರ ಶಾಸಕರಿಗಾಗಿ ನಡೆದ ಹೈಡ್ರಾಮದಿಂದಾಗಿ ರಾಜಧಾನಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನಗಳವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಅಂತ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.

ವಿಶ್ವಾಸ ಮತ ಸಂದರ್ಭಕ್ಕೆ ಕಲಾಪಕ್ಕೆ ಹಾಜರಾಗಬೇಕಾಗಿದ್ದ ಪಕ್ಷೇತರ ಶಾಸಕರ ಆರ್.ಶಂಕರ್, ಹೆಚ್.ನಾಗೇಶ್ ಗಾಗಿ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸೋ ಮೂಲಕ ನಡುರಸ್ತೆಯಲ್ಲಿ ಹೈಡ್ರಾಮಾ ನಡೆಸಿದ್ರು.  

ಪಕ್ಷೇತರ ಶಾಸಕರಿದ್ದ ಹೋಟೆಲ್ ಗೆ ನುಗ್ಗಲು ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರು ಮುಂದಾದಾಗ ಅವರನ್ನ ಪೊಲೀಸರು ಚದುರಿಸಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿಯಲ್ಲಿ ಭಾರೀ ಮಳೆ; ರೈಲು ಸಂಚಾರ- ಶಾಲೆ ಕಾಲೇಜು ಬಂದ್