Select Your Language

Notifications

webdunia
webdunia
webdunia
webdunia

ಫೆಬ್ರವರಿ 1 ರಿಂದ ವಾಹನ ಸವಾರರೇ ಹುಷಾರ್

ಫೆಬ್ರವರಿ 1 ರಿಂದ ವಾಹನ ಸವಾರರೇ ಹುಷಾರ್
ಮಂಡ್ಯ , ಭಾನುವಾರ, 12 ಜನವರಿ 2020 (21:18 IST)
ವಾಹನಗಳ ಸವಾರರು ಫೆಬ್ರವರಿ 1 ರಿಂದ ತುಸು ಎಚ್ಚರ ಹಾಗೂ ಹುಷಾರ್ ಆಗಿರಬೇಕಾಗುತ್ತದೆ.

ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ದ್ವಿಚಕ್ರ ಸವಾರರು ಫೆ. 1 ರಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕೆಂಬ ನಿಯಮ ರೂಪಿಸಲಾಗಿದೆ.

ವಾಹನ ಸವಾರರು ಈ ನಿಯಮವನ್ನು ಪಾಲಿಸುವ ಮೂಲಕ ಸುಗಮ ಸಂಚಾರಕ್ಕೆ ಹಾಗೂ ಅಪಘಾತ ಮುಕ್ತ ಪಟ್ಟಣ ನಿರ್ಮಾಣಕ್ಕೆ ಸಹಕಾರ ನೀಡಬೇಕು.

ಹೀಗಂತ ಪಟ್ಟಣ ಪೊಲೀಸ್ ಠಾಣೆಯ ಸಬ್‌ ಇನ್ಸ್  ಪೆಕ್ಟರ್  ಬ್ಯಾಟರಾಯಗೌಡ ಹೇಳಿದ್ದಾರೆ.

ವಾಹನಗಳ ದಾಖಲಾತಿ, ಲೈಸೆನ್ಸ್, ಇನ್ಸೂರೆನ್ಸ್, ಹೆಲ್ಮೆಟ್, ಎಮಿಷನ್ ಟೆಸ್ಟಿಂಗ್ ಸರಿಯಾಗಿರುವಂತೆ ನೋಡಿಕೊಳ್ಳಬೇಕು.
ಒನ್ ವೇನಲ್ಲಿ ಹೋಗೋದು, ತ್ರಿಬಲ್ ರೈಡಿಂಗ್, ಅಪ್ರಾಪ್ತರು ಚಾಲನೆ ಮಾಡಿದ್ರೆ ದಂಡ ವಿಧಿಸೋದಾಗಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಜಮೀರ್ ಅಹ್ಮದ್ ಧರಣಿಗೂ ಮೊದಲೇ ನಡುಗಿದ್ರಾ ಗಣಿ ಧಣಿ ರೆಡ್ಡಿ?