Select Your Language

Notifications

webdunia
webdunia
webdunia
webdunia

ಪತ್ನಿಗೆ ನಡೆದ ಕೆಟ್ಟ ಘಟನೆ ; ಆರೋಪಿಗಳ ವಿರುದ್ಧ ಸೇಡು ತೀರಿಸಿಕೊಂಡ ಪತಿ

ಪತ್ನಿಗೆ ನಡೆದ ಕೆಟ್ಟ ಘಟನೆ ; ಆರೋಪಿಗಳ ವಿರುದ್ಧ ಸೇಡು ತೀರಿಸಿಕೊಂಡ ಪತಿ
ಧಾರವಾಡ , ಗುರುವಾರ, 9 ಜನವರಿ 2020 (17:17 IST)
ಪತ್ನಿಯ ಆ ಕೆಟ್ಟ ಘಟನೆಗೆ ಕಾರಣವಾಗಿದ್ದವರ ವಿರುದ್ಧ ನಡೆದ ಹೋರಾಟದಲ್ಲಿ ಪತಿಯೊಬ್ಬ ಜಯ ಗಳಿಸಿದ್ದಾರೆ.

ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ತನ್ನ ಪತ್ನಿಯ ಸಾವಿಗೆ ಕಾರಣರಾಗಿದ್ದ ಧಾರವಾಡ ಜಿಲ್ಲಾಸ್ಪತ್ರೆಯ ಸಿಬ್ಬಂದಿ ವಿರುದ್ಧ ಹೋರಾಟ ನಡೆಸಿದ ಪತಿಗೆ ಕೊನೆಗೂ ಜಯ ಸಿಕ್ಕಿದೆ.

ಕಳೆದ ಒಂದು ವರ್ಷದ ಹಿಂದೆ ಕರ್ತವ್ಯ ಲೋಪ ಎಸಗಿ ಮಹಿಳೆಯೊಬ್ಬರ ಸಾವಿಗೆ ಕಾರಣರಾಗಿದ್ದ ನಾಲ್ಕು ಜನ ಜಿಲ್ಲಾ ಆಸ್ಪತ್ರೆ ಸಿಬ್ಬಂದಿಯನ್ನ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಆ ಮೂಲಕ ಹೋರಾಟ ನಡೆಸಿದ ಪತಿಯ ಪ್ರಯತ್ನಕ್ಕೆ ಕೊಂಚ ನ್ಯಾಯ ದೊರಕಿದಂತಾಗಿದೆ.

ಜಿಲ್ಲಾಸ್ಪತ್ರೆಯ ಡಾ. ಆಶ್ರಪುಲ್ಲಾ ಎಮ್.ಆರ್ (ಹಿರಿಯ ತಜ್ಞ), ಡಾ. ಸುನಂದಾ ಮಾಡಬಾಳ, ವಿದ್ಯಾವತಿ.ಎನ್ (ಶುಶ್ರೂಶಕಿ), ಈರಣ್ಣ ಬೆಳಗಾವಿ (ಡಿ ಗ್ರೂಪ್‌ ನೌಕರ) ಇವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

2018ರಲ್ಲಿ ಈ ನಾಲ್ವರ ಕರ್ತವ್ಯದಲ್ಲಿನ ನಿರ್ಲಕ್ಷ್ಯತೆಯಿಂದಾಗಿ ಮಹಿಳಾ ರೋಗಿಯೊಬ್ಬರು ಮೃತಪಟ್ಟಿದ್ದರು. ತನ್ನ ಪತ್ನಿಯ ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ಮೃತಳ ಪತಿ ಪ್ರಶಾಂತ ಪವಾರ ಎಂಬುವರು ನಿರಂತರ ಒಂದು ವರ್ಷದಿಂದ ಹೋರಾಟ ನಡೆಸಿದ್ದರು.  



Share this Story:

Follow Webdunia kannada

ಮುಂದಿನ ಸುದ್ದಿ

ಐದು ಮಹಾನಗರ ಪಾಲಿಕೆಗಳ ಆಡಳಿತ ಜಿಲ್ಲಾಧಿಕಾರಿಗಳ ತೆಕ್ಕೆಗೆ