Select Your Language

Notifications

webdunia
webdunia
webdunia
webdunia

ಮಕ್ಕಳಾಗಲಿಲ್ಲ ಎಂದು ಪತ್ನಿಯನ್ನೇ ಕೊಂದ ಪಾಪಿ ಪತಿ

ಮಕ್ಕಳಾಗಲಿಲ್ಲ ಎಂದು ಪತ್ನಿಯನ್ನೇ ಕೊಂದ ಪಾಪಿ ಪತಿ
ಕಲಬುರ್ಗಿ , ಶನಿವಾರ, 28 ಅಕ್ಟೋಬರ್ 2017 (13:32 IST)
ಕಲಬುರ್ಗಿ: ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಪತಿಯೇ ಪತ್ನಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಅಫ್ಜಲ್ ಪುರ ಪಟ್ಟಣದಲ್ಲಿ ನಡೆದಿದೆ.

ಚಂದ್ರಕಲಾ ಹಿರೇಮಠ್(25) ಹತ್ಯೆಯಾದ ನತದೃಷ್ಟ ಮಹಿಳೆ. ಆರು ವರ್ಷದ ಹಿಂದೆ ವೈಜನಾಥ ಹಿರೇಮಠ ಎಂಬಾತನಿಂದಿಗೆ ಚಂದ್ರಕಲಾ ಮದುವೆಯಾಗಿತ್ತು. ದುರಾದೃಷ್ಟಕ್ಕೆ ದಂಪತಿಗೆ ಮಕ್ಕಳಾಗಿರಲಿಲ್ಲ. ಇದೇ ವಿಷಯವಾಗಿ ಇಬ್ಬರ ನಡುವೆ ಆಗಾಗ ಕಲಹ ನಡೆಯುತಿತ್ತು ಎನ್ನಲಾಗಿದೆ.

ಎಂದಿನಂತೆ ದಂಪತಿಗಳ ನಡುವೆ ಜಗಳ ನಡೆದಿದ್ದು, ವಿಕೋಪಕ್ಕೆ ತಿರುಗಿ ಪತಿ ವೈಜನಾಥ ತನ್ನ ಪತ್ನಿ ಚಂದ್ರಕಲಾ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆರೋಪಿ ವೈಜನಾಥನನ್ನು ಬಂಧಿಸಿದ್ದಾರೆ. ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈಯಂತೆ, ಬೆಂಗಳೂರಿನಲ್ಲೂ ಲೋಕಲ್ ರೈಲು ಸಂಪರ್ಕ: ಗೋಯಲ್