Select Your Language

Notifications

webdunia
webdunia
webdunia
webdunia

ಖರ್ತನಾಕ್ ಐಡಿಯಾದಿಂದ ಪತಿಯನ್ನೇ ಅಪಹರಿಸಿ ಹೀನಾಯವಾಗಿ ಕೊಂದ್ಳು..!

ಖರ್ತನಾಕ್ ಐಡಿಯಾದಿಂದ ಪತಿಯನ್ನೇ ಅಪಹರಿಸಿ ಹೀನಾಯವಾಗಿ ಕೊಂದ್ಳು..!
ಬೆಂಗಳೂರು , ಶುಕ್ರವಾರ, 4 ಫೆಬ್ರವರಿ 2022 (08:06 IST)
ಬೆಂಗಳೂರು : ಪತ್ನಿಯೊಬ್ಬಳು 20 ಗುಂಟೆ ಜಮೀನಿಗಾಗಿ ಮಗನ ಜೊತೆಗೆ ಸೇರಿ ಪತಿಯನ್ನೇ ಕಿಡ್ನಾಪ್ ಮಾಡಿ ಚಾಕುವಿನಿಂದ ಇರಿದು ಕೊಂದ ಘಟನೆ ನಗರದ ಹೊರವಲಯದ ಬನ್ನೇರುಘಟ್ಟದಲ್ಲಿ ನಡೆದಿದೆ.

ಚನ್ನಿಗರಾಯಪ್ಪ ಕೊಲೆಯಾದ ವ್ಯಕ್ತಿ. ಮೃತನು ಎರಡು ಮದುವೆ ಆಗಿದ್ದು, ಇಬ್ಬರು ಪತ್ನಿಯರಿಗೆ ಆಸ್ತಿ ಹಂಚಿಕೆ ಮಾಡುವ ವೇಳೆ ಇಪ್ಪತ್ತು ಗುಂಟೆ ಜಮೀನು ವಿಚಾರವಾಗಿ ವಿವಾದವಾಗಿತ್ತು. ಇದೇ ವಿಚಾರಕ್ಕೆ ಆರೋಪಿಗಳು ಮತ್ತು ಚನ್ನಿಗರಾಯಪ್ಪನ ಮಧ್ಯೆ ಗಲಾಟೆ ನಡೆದು ಪತಿಯನ್ನು ಕಿಡ್ನಾಪ್ ಮಾಡಿದ್ದರು.

ಕಿಡ್ನಾಪ್ ಮಾಡಿ ಕಾರಿನಲ್ಲಿ 22 ಬಾರಿ ಚಾಕುವಿನಿಂದ ಕೊಲೆ ಮಾಡಿ ಬೆಂಕಿ ಹಾಕಿ ಸುಟ್ಟಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚನ್ನಿಗರಾಯಪ್ಪ ಪತ್ನಿ ಯಶೋಧ, ಮಗ ನಿಖಿಲ್, ಮಂಜುನಾಥ್ ಹಾಗೂ ವಿಶ್ವಾಸ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ