Webdunia - Bharat's app for daily news and videos

Install App

ಬೇಲ್ ಪುರಿ, ತರಕಾರಿ - ಗ್ರಾಮಸ್ಥರಿಗೆ ಮಾರಿದ ಶಾಲೆ ಮಕ್ಕಳು

Webdunia
ಶನಿವಾರ, 14 ಸೆಪ್ಟಂಬರ್ 2019 (19:15 IST)
ಶಿಕ್ಷಕರು ಹಾಗೂ ಅಧಿಕಾರಿಗಳು ಮತ್ತು ಗ್ರಾಮಸ್ಥರಿಗೆ ನೂರಾರು ಮಕ್ಕಳು ಬೇಲ್ ಪುರಿ, ತರಕಾರಿ ಮಾರಾಟ ಮಾಡಿದ ಘಟನೆ ನಡೆದಿದೆ.

ಇದು ನಿಜವಾಗಿ ನಡೆದ ಘಟನೆ. ಮಂಡ್ಯ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಮಕ್ಕಳ ಸಂತೆಯ ಸಂಭ್ರಮ ಮನೆ ಮಾಡಿತ್ತು.

ಸುಗಮ್ಯ ಶಿಕ್ಷಾ ಕಾರ್ಯಕ್ರಮದ ಅಡಿಯಲ್ಲಿ ನಡೆದ ಮಕ್ಕಳ ಸಂತೆ ಇದಾಗಿತ್ತು. ಸಡಗರ ಸಂಭ್ರಮದಿಂದ ಸಂತೆಯಲ್ಲಿ ಭಾಗವಹಿಸಿ ವ್ಯಾಪಾರ ವ್ಯವಹಾರ ಮಾಡಿದ ಮಕ್ಕಳು ಗಮನ ಸೆಳೆದರು.

ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ವ್ಯಾಪಾರ, ವ್ಯವಹಾರ ಜೋರಾಗಿತ್ತು.
ವಿವಿಧ ವೇಷಭೂಷಣಗಳನ್ನು ಧರಿಸಿದ್ದ ಮಕ್ಕಳು ವ್ಯಾಪಾರಿಗಳು ನಾಚುವಂತೆ ಪೈಪೋಟಿಯ ಮೇಲೆ ವ್ಯಾಪಾರ ಮಾಡಿ ಗಮನ ಸೆಳೆದರು.

ಅಣ್ಣಾ ಬನ್ನಿ. ಅಕ್ಕಾ ಬನ್ನೀ ಅಕ್ಕ ನಮ್ಮತ್ರ ಒಳ್ಳೊಳ್ಳೆ ತರಕಾರಿ ಇದೆ ಬನ್ನಿ. ಸೊಪ್ಪು ಒಂದು ಕಂತೆಗೆ ಹತ್ತೇ ರೂಪಾಯಿ ಬನ್ನಿ. ಬೇಲ್ ಪುರಿ, ಚುರುಮುರಿ ತಗೊಳ್ಳಿ ಅದೂ ಹತ್ತೇ ರೂಪಾಯಿ, ಸೇವಂತಿಗೆ ಹೂವನ್ನು ತಗೊಳ್ಳಿ ಮಾರು  ಹತ್ತೇ ರೂಪಾಯಿ ಎಂದು ಗ್ರಾಹಕರನ್ನು ಸೆಳೆದು ವ್ಯಾಪಾರ ಮಾಡುತ್ತಿದ್ದುದು ಕಂಡು ಬಂತು.

ಮಕ್ಕಳ ಸಂತೆಯನ್ನು ಉದ್ಘಾಟಿಸಿದ ಸಂತೆವ್ಯಾಪಾರಿ ರೈತಮಹಿಳೆ ಸುಬ್ಬಮ್ಮ ಮಕ್ಕಳಿಂದ ವಿವಿಧ ವಸ್ತುಗಳನ್ನು ಖರೀದಿಸಿದರು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments