Select Your Language

Notifications

webdunia
webdunia
webdunia
webdunia

ಫಾರ್ಮ್ ಹೌಸ್ ನಲ್ಲಿ ಸೂರಜ್ ರೇವಣ್ಣ ಕಾಲು ಒತ್ತಲು ಹೇಳಿ ಮಾಡಿದ್ದೇನು ಬಿಚ್ಚಿಟ್ಟ ಯುವಕ

Sooraj Revanna

Krishnaveni K

ಬೆಂಗಳೂರು , ಬುಧವಾರ, 26 ಜೂನ್ 2024 (10:40 IST)
ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಸೂರಜ್ ರೇವಣ್ಣ ಮೇಲೆ ಸಂತ್ರಸ್ತ ಯುವಕ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾನೆ.

ಅಮವಾಸ್ಯೆ ದಿನ ಸೂರಜ್ ಬಳೆ ಹಾಕಿ, ಸೀರೆ ತೊಟ್ಟುಕೊಳ್ಳುತ್ತಾರೆ ಎಂಬ ವಿಚಿತ್ರ ವಿಚಾರವನ್ನು ಯುವಕ ಹೇಳಿಕೊಂಡಿದ್ದಾನೆ. ಇದು ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ ಯುವಕ ಹೇಳಿದ ವಿಚಾರ ಕೇಳಿ ಬೆಚ್ಚಿ ಬೀಳುವಂತಾಗಿದೆ. ಸೂರಜ್ ರೇವಣ್ಣ ವರ್ತನೆ ಬಗ್ಗೆ ಆತ ಹೇಳಿಕೊಂಡಿದ್ದಾನೆ.

ಈ ಮೊದಲು ಹೊಳೆನರಸೀಪುರದಲ್ಲಿ ಜೆಡಿಎಸ್ ಸಮಾವೇಶವೊಂದನ್ನು ನಡೆಸಿಕೊಟ್ಟಿದ್ದೆ. ಅದನ್ನು ನೋಡಿ ಮೆಚ್ಚಿಕೊಂಡಿದ್ದ ಸೂರಜ್ ನನ್ನ ಫೋನ್ ನಂಬರ್ ತೆಗೆದುಕೊಂಡರು. ಬಳಿಕ ನನಗೆ ಒಂದು ದಿನ ಗುಡ್ ಮಾರ್ನಿಂಗ್ ಮೆಸೇಜ್ ಜೊತೆಗೆ ಲವ್ ಸಿಂಬಲ್ ಇರುವ ಇಮೋಜಿ ಕಳುಹಿಸಿದ್ದರು.

ಅದಾದ ಬಳಿಕ ನನ್ನನ್ನು ಫಾರ್ಮ್ ಹೌಸ್ ಗೆ ಬರಲು ಹೇಳಿದ್ದರು. ಫಾರ್ಮ್ ಹೌಸ್ ನಲ್ಲಿ ನನ್ನನ್ನು ರೂಂ ಒಳಗೆ ಕರೆದೊಯ್ದರು. ಆ ವೇಳೆ ಮೊದಲು ಕಾಲು ಒತ್ತಲು ಹೇಳಿದರು. ಕಾಲು ಒತ್ತುವಾಗ ಏನು ಮಾಡಿದರು ಎಂದು ನಾನು ಇಲ್ಲಿ ಹೇಳಲೂ ಸಾಧ್ಯವಿಲ್ಲ ಎಂದು ಯುವಕ ಹೇಳಿಕೊಂಡಿದ್ದಾನೆ. ಅಮವಾಸ್ಯೆ ದಿನ ಸೂರಜ್ ಸೀರೆ ಉಡ್ತಾನೆ, ಬಳೆ ತೊಡ್ತಾನೆ ಎಂದು ಯುವಕ ಹೇಳಿಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಪ್ರಜ್ವಲ್ ರೇವಣ್ಣ ಬಳಿಕ ಈಗ ಸೂರಜ್ ರೇವಣ್ಣಗೂ ಪುರುಷತ್ವ ಪರೀಕ್ಷೆ