Webdunia - Bharat's app for daily news and videos

Install App

ತಾಯಿ-ಮಕ್ಕಳಿಬ್ಬರಿಗೆ ದುರಂತ ಸಾವು ಬಂದಿದ್ದು ಹೇಗೆ?

Webdunia
ಸೋಮವಾರ, 10 ಜೂನ್ 2019 (19:44 IST)
ತಾಯಿ ಹಾಗೂ ಆಕೆಯ ಮಕ್ಕಳಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಟ್ಟೆತೊಳೆಯಲು ಹೋಗಿದ್ದ ಗೃಹಿಣಿಯೊಬ್ಬಳು ತನ್ನ ಮಕ್ಕಳೊಂದಿಗೆ ಸಾವನ್ನಪ್ಪಿದ್ದಾಳೆ. ಮೊದಲಿಗೆ ಕಾಲು ಜಾರಿ ಮಗನೊಬ್ಬ ಬಾವಿಗೆ ಬೀಳುತ್ತಿದ್ದ. ಆತನನ್ನು ರಕ್ಷಿಸಲು ಹೋಗಿ ಆಯತಪ್ಪಿ ಮತ್ತೊಬ್ಬ ಮಗನೊಂದಿಗೆ ಬಾವಿಯಲ್ಲಿ ಬಿದ್ದು ತಾಯಿಯೂ ಮೃತಪಟ್ಟಿದ್ದಾಳೆ.

ಚಿಕ್ಕಬಳ್ಳಾಪುರ ಜಿಲ್ಲೆಯ ತಿಪ್ಪೆನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವಿಜಯಲಕ್ಷ್ಮೀ (30), ಆಕೆಯ ಪುತ್ರ ಅಜಯ್ (10) ಹಾಗೂ ಪುತ್ರಿ ಧನಲಕ್ಷ್ಮೀ (8) ಸಾವನ್ನಪ್ಪಿದ್ದಾರೆ.

ತಿಪ್ಪೆನಹಳ್ಳಿಯ ನಾಗರಾಜ್ ಎಂಬುವರೊಂದಿಗೆ 11 ವರ್ಷಗಳ ಹಿಂದೆ ವಿಜಯಲಕ್ಷ್ಮೀ ಮದುವೆಯಾಗಿದ್ದರು. ಬಟ್ಟೆ ಒಗೆಯಲು ತನ್ನಿಬ್ಬರು ಮಕ್ಕಳೊಂದಿಗೆ ತೋಟದ ಬಾವಿಗೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ತೋಟದ ಬಾವಿಗೆ ಹೋದ ಮಡದಿ, ಮಕ್ಕಳು ಎಷ್ಟು ಹೊತ್ತು ಆದರೂ ಬಾರದ ಕಾರಣ ಬಾವಿ ಹತ್ತಿರ ಹೋಗಿ ಪತಿ ನಾಗರಾಜ್ ನೋಡಿದಾಗ ಮೂವರು ಸಾವನ್ನಪ್ಪಿರುವುದು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments