Webdunia - Bharat's app for daily news and videos

Install App

ಬಗೆಹರಿಯದ ಹೊರನಾಡ ಟೆಂಪಲ್ ರೋಡ್ ಪ್ರಾಬ್ಲಂ

Webdunia
ಮಂಗಳವಾರ, 7 ಆಗಸ್ಟ್ 2018 (15:38 IST)
ಹೊರನಾಡ ಅಧಿದೇವತೆ ಶ್ರೀ ಅನ್ನಪೂರ್ಣೇಶ್ವರಿಗೂ ಸರ್ಕಾರ ಹಾಗೂ ಅಧಿಕಾರಿಗಳಂದ್ರೆ ಅಪನಂಬಿಕೆ ಹಾಗೂ ಭಯ. ಈ ಮಳೆಗಾಲದಲ್ಲಿ ಕಿತ್ತೋದ ರಸ್ತೆ ಮುಂದಿನ ಮಳೆಗಾಲಕ್ಕೆ ದುರಸ್ತಿಯಾದ್ರೆ  ಪುಣ್ಯ ಎನ್ನುವಂತಾಗಿದೆ.

ಇವರನ್ನ ನೆಚ್ಚಿಕೊಂಡ್ರೆ ಆಗೋದಿಲ್ಲ ಎಂದು ತನ್ನ ರಸ್ತೆಯನ್ನ ತಾನೇ ಸರಿಪಡಿಸಿಕೊಂಡಿದ್ದಾಳೆ ದೇವಿ. ಈ ವರ್ಷ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭದ್ರೆಯ ರಭಸಕ್ಕೆ ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ ಶಿಥಿಲಾವಸ್ಥೆ ತಲುಪಿತ್ತು. ಒಂದೇ ತಿಂಗಳಲ್ಲಿ ಈ ಸೇತುವೆ ಏಳು ಬಾರಿ ಮುಳುಗಿತ್ತು. ಸೇತುವೆ ಮೇಲಿನ ಸಿಮೆಂಟ್ ಕಾಂಕ್ರೀಟ್ ಕಿತ್ತು ಹೋಗಿ, ಅಲ್ಲಲ್ಲೇ ರಂಧ್ರಗಳಾಗಿ, ಸೇತುವೆ ಮೇಲಿದ್ದ ತಡೆಗೋಡೆಯ ಕಂಬಗಳು ಮುರಿದು ಬಿದ್ದಿವೆ. ಕಾಂಕ್ರೀಟ್ ಕಿತ್ತಿದ್ರಿಂದ ಕಬ್ಬಿಣದ ಸರಳುಗಳು ಹೊರಬಂದಿದ್ವು.

ಕಳೆದೊಂದು ತಿಂಗಳಿನಿಂದ ಸೇತುವೆ ಸ್ಥಿತಿ ಹೀಗೆ ಇದ್ರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ, ಸೇತುವೆ ಮೇಲೆ ಕಬ್ಬಿಣದ ಸರಳುಗಳು ಹೊರಬಂದಿರೋದ್ರಿಂದ ಭಕ್ತರು ಅಥವಾ ಪ್ರವಾಸಿಗರ ಕಾರಿನ ಟೈರ್‍ಗಳಿಗೆ ಚುಚ್ಚಿ ಅನಾಹುತವಾದ್ರೆ ಗತಿ ಏನೆಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿಯಿಂದ ಹೆಬ್ಬಾಳೆ ಸೇತುವೆಯನ್ನ ದುರಸ್ಥಿ ಮಾಡಲಾಗಿದೆ. ಸೇತುವೆಯಲ್ಲಿ ಎಲ್ಲೆಲ್ಲಿ ಕಿತ್ತು ಹೋಗಿತ್ತೋ ಅಲ್ಲೆಲ್ಲಾ ದೇವಸ್ಥಾನದ ವತಿಯಿಂದ ಸಿಮೆಂಟ್ ಕಾಂಕ್ರೀಟ್ ಹಾಕಿಸಿ, ಭಕ್ತರು ಹಾಗೂ ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾದಯಾತ್ರೆ ಆರಂಭಿಸಿದ ಬಳಿಕ, ಡಿಕೆ ಶಿವಕುಮಾರ್ ಉತ್ತರ ಕರ್ನಾಟಕದತ್ತ ಮುಖ: ವಿಜಯೇಂದ್ರ

ವಿಟ್ಲಪಿಂಡಿ ಉತ್ಸವದ ವೇಳೆ ಕೆಳಗೆ ಬಿದ್ದ ಕೃಷ್ಣನ ಮಣ್ಣಿನ ಮೂರ್ತಿ, ಭಕ್ತರಲ್ಲಿ ಆತಂಕ

ದೆಹಲಿ ಕಟ್ಟಡ ದುರಂತ, ಹಲವರು ಸಿಲುಕಿರುವ ಶಂಕೆ, ಇಬ್ಬರ ರಕ್ಷಣೆ

ಮಂಗಳೂರಿನಲ್ಲಿ 6ತಿಂಗಳ ಹಿಂದಿನ ಮಾಂಸ ಪತ್ತೆ ಬೆನ್ನಲ್ಲೇ ಕೆಎಫ್‌ಸಿಯ ಡೀಪ್ ಪ್ರೈಡ್ ಚಿಕನ್‌ನಲ್ಲಿ ಹುಳ, Video

ಪ್ರಜಾಪ್ರಭುತ್ವದಲ್ಲಿ ಪ್ರಶ್ನೆಗಳನ್ನು ಹತ್ತಿಕ್ಕಲು ಪ್ರಧಾನಿ ಮೋದಿ ಯತ್ನಿ: ಮಲ್ಲಿಕಾರ್ಜುನ ಖರ್ಗೆ ಕಿಡಿ

ಮುಂದಿನ ಸುದ್ದಿ
Show comments