Select Your Language

Notifications

webdunia
webdunia
webdunia
webdunia

ಸಚಿವ ರಮಾನಾಥ್ ರೈ ಅಟ್ಟಾಡಿಸಿ ಓಡಿಸಿದ ಜೇನು ನೊಣ!

ಸಚಿವ ರಮಾನಾಥ್ ರೈ ಅಟ್ಟಾಡಿಸಿ ಓಡಿಸಿದ ಜೇನು ನೊಣ!
ಬೆಳಗಾವಿ , ಶನಿವಾರ, 25 ನವೆಂಬರ್ 2017 (09:26 IST)
ಬೆಳಗಾವಿ: ಕಾರ್ಯಕ್ರಮವೊಂದರ ಉದ್ಘಾಟನೆಗೆ ಬಂದಿದ್ದ ಅರಣ್ಯ ಸಚಿವ ರಮಾನಾಥ್ ರೈಯವರನ್ನು ಜೇನು ನೊಣಗಳು ಅಟ್ಟಾಡಿಸಿ ಓಡಿಸಿದ ಘಟನೆ ನಡೆದಿದೆ.
 

ಬೆಳಗಾವಿಯಲ್ಲಿ ಜೈವಿಕ ಉದ್ಯಾನವನ ಉದ್ಘಾಟನೆಗೆಂದು ಬಂದಿದ್ದ ಸಚಿವರು ವೇದಿಕೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಜೇನು ನೊಣಗಳು ದಾಳಿ ಮಾಡಿವೆ. ವೇದಿಕೆಯಲ್ಲಿದ್ದ ಗಣ್ಯರಿಗೆ ಜೇನು ನೊಣಗಳು ಕಚ್ಚಿವೆ. ಸಚಿವ ರಮಾನಾಥ್ ಕಣ್ಣಿನ ಬಳಿ ಜೇನು ಕಚ್ಚಿದೆ.

ತಕ್ಷಣ ಅಲ್ಲಿದ್ದ ಅಧಿಕಾರಿಗಳು ಸಚಿವರನ್ನು ಕಾರಿನಲ್ಲಿ ಕೂರಿಸಿ ಅಪಾಯವಾಗದಂತೆ ನೋಡಿಕೊಂಡರು. ಜೇನು ನೊಣಗಳು ದಾಳಿ ಮಾಡಿದ್ದರಿಂದ ಸಚಿವರು ಕಾರ್ಯಕ್ರಮವನ್ನು ಅರ್ಧದಲ್ಲಿಯೇ ಬಿಟ್ಟು ಸಚಿವರು ತೆರಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಗಾಗಿ ನಡುರಸ್ತೆಯಲ್ಲಿ ಹೊಡೆದಾಟ