Select Your Language

Notifications

webdunia
webdunia
webdunia
webdunia

ಕೊರೊನಾ ಓಡಿಸಲು ಹೋಮ ಮಾಡಿದ ಸಚಿವ

ಕೊರೊನಾ ಓಡಿಸಲು ಹೋಮ ಮಾಡಿದ ಸಚಿವ
ಮಂಡ್ಯ , ಭಾನುವಾರ, 28 ಜೂನ್ 2020 (17:32 IST)
ಮಹಾಮಾರಿ ಕೊರೊನಾ ನಿರ್ಮೂಲನೆಗಾಗಿ ಪ್ರಾರ್ಥಿಸಿ ರಾಜ್ಯದ ಸಚಿವರೊಬ್ಬರು ಹೋಮ ಮಾಡಿದ್ದಾರೆ.

ತೋಟಗಾರಿಕೆ, ರೇಷ್ಮೆ, ಪೌರಾಡಳಿತ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ದಂಪತಿ ನೇತೃತ್ವದಲ್ಲಿ ಸಕಲ ಜ್ವರ ನಿವಾರಣಾ ಧನ್ವಂತರಿ ಹೋಮವನ್ನು ಶ್ರದ್ಧಾಭಕ್ತಿಯಿಂದ ಕೆ.ಆರ್.ಪೇಟೆ ಪಟ್ಟಣದ ಭ್ರಮರಾಂಬಿಕ ಚೆನ್ನಮಲ್ಲಿಕಾರ್ಜುನಸ್ವಾಮಿ ದೇವಾಲಯದ ಆವರಣದಲ್ಲಿ ನಡೆಸಲಾಯಿತು .

ಕೊರೊನಾ ಸೇರಿದಂತೆ ಯಾವುದೇ ಬಗೆಯ ಪೀಡೆಗಳು, ಜ್ವರಗಳು, ದೇಹಭಾದೆಗಳು ಕಾಡದಂತೆ ಆರೋಗ್ಯ ಕರುಣಿಸುವಂತೆ ಲೋಕಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಹೋಮ ಹವನವನ್ನು ನಡೆಸಿ ಪೂರ್ಣಾಹುತಿ ಸಲ್ಲಿಸಿ ಧನ್ವಂತರಿ ಹಾಗೂ ಪ್ರಕೃತಿಮಾತೆಗೆ ಪ್ರಾರ್ಥನೆ ಸಲ್ಲಿಸಲಾಯಿತು.



Share this Story:

Follow Webdunia kannada

ಮುಂದಿನ ಸುದ್ದಿ

ಕಳ್ಳತನ ಆರೋಪಿಗೆ ಕೊರೊನಾ : ಪೊಲೀಸರು, ಜೈಲು ಸಿಬ್ಬಂದಿ ಪಾಡೇನು?