Webdunia - Bharat's app for daily news and videos

Install App

ಟೆಲಿಗ್ರಾಂನಲ್ಲಿ ಆಕ್ಟಿವ್ ಇರೋ ಯುವಕರೇ ಇವರ ಟಾರ್ಗೆಟ್

Webdunia
ಮಂಗಳವಾರ, 1 ಆಗಸ್ಟ್ 2023 (21:19 IST)
ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿನ ವಿನಾಯಕ ನಗರದ ಮನೆಯೊಂದರಲ್ಲಿ ನದೀಮ್, ಅಬ್ದುಲ್ ಖಾದರ್, ಶರಣಪ್ರಕಾಶ್ ಬಳಿಗೇರ, ಎಂಬುವವರು ಮುಂಬಯಿ ಮೂಲದ ಮಾಡಲ್ ಒಬ್ಬಳ ಪೋಟೋ ಇರುವ ಡಿಪಿ ಬಳಸಿ ಟೆಲಿಗ್ರಾಂ ನಲ್ಲಿ ಚಾಟ್ ಶುರುಮಾಡ್ತಾರೆ.. ನನ್ನ ಗಂಡ ದುಬೈ ನಲ್ಲಿದ್ದಾನೆ. ನಾನು ಒಬ್ಬಳೇ ಮನೆಯಲ್ಲಿ ಇದೀನಿ ಅಂತಾ ಯುವಕರನ್ನು ಖೆಡ್ಡಾಗೆ ಬೀಳಿಸ್ತಾರೆ. ಯಾವಾಗ ಬಕ್ರ ಬೊನಿಗೆ ಬಿತ್ತು ಅಂತಾ ಗೊತ್ತಾಗುತ್ತೋ, ಆಗ ಮುಂಬಯಿ ನಿಂದ ಮಾಡಲ್ ಮೆಹರ್ ಅಲಿಯಾಸ್ ನೇಹಾ ಬೆಂಗಳೂರಿಗೆ ಎಂಟ್ರಿ ಕೊಡ್ತಾಳೆ.

ಈ ಗ್ಯಾಂಗ್ ನ ಕಿಂಗ್ ಪಿನ್ ಈ ಶರಣಪ್ರಕಾಶ್ ಬಳಿಗೇರ.. ವಿದೇಶದಲ್ಲಿ ಎಂಬಿಎ ಮಾಡಿರೋ ಈತ ಸುಲಭವಾಗಿ ಹಣ ಮಾಡಲು ತನ್ನದೇ ಗ್ಯಾಂಗ್ ನ್ನ ಕಟ್ಕೊಂಡು ಈ ದಂಧೆಗಿಳಿದಿದ್ದ.. ಇದಕ್ಕೆ ಆರೋಪಿ ಯಾಸಿನ್ ಬಳಸಿ ವಿನಾಯಕ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದ. ಯಾವಾಗ ಕಸ್ಟಮರ್ ಗಳು ಬಲೆಗೆ ಬೀಳ್ತಾರೋ ಅವರನ್ನ ಈ ಬಾಡಿಗೆ ಮನೆಗೆ ಕರೆತಂದು ಹನಿಟ್ರಾಪ್ ಮಾಡ್ತದ್ರು. ಇದೇ ರೀತಿ ಬರೊಬ್ಬರಿ 12 ಮಂದಿಗೆ ಈ ರೀತಿ ಬೆದರಿಸಿ 30 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿರೋದು ಗೊತ್ತಾಗಿದೆ.. ಇನ್ನೂ ಹಲವರಿಗೆ ಇದೇ ರೀತಿ ಮಾಡಿರೋ ಬಗ್ಗೆ ಪೊಲೀಸರಿಗೆ ಸಂಶಯ ವ್ಯಕ್ತವಾಗಿದೆ.. ಸದ್ಯ ಮಾಡೆಲ್ ನೇಹಾ ಅಲಿಯಾಸ್ ಮೆಹರ್, ನದೀಮ್ ಎಸ್ಕೇಪ್ ಆಗಿದ್ದಾರೆ.. ಈ ಇಬ್ಬರ ಬಂಧನಕ್ಕೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು, ಅವರ ಬಂಧನದ ನಂತರ ಮತ್ತಷ್ಟು ಸ್ಟೋಟಕ ಮಾಹಿತಿಗಳು ಹೊರಗೆ ಬರಬೇಕಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ಊಹಿಸಲಾಗದ ರೀತಿ ಪಾಕಿಸ್ತಾನ ಮೇಲೆ ದಾಳಿ ಮಾಡಿದ ಭಾರತ

India Pakistan:ರಾತ್ರಿಯಾಗುತ್ತಿದ್ದಂತೇ ಪಾಕಿಸ್ತಾನದಿಂದ ಮತ್ತೆ ದಾಳಿ ಶುರು, 3 ರಾಜ್ಯ ಟಾರ್ಗೆಟ್

Operation Sindoor Effect:ಈ ವಿಷಯ ಗೊತ್ತಿಲ್ಲದೆ ಮಾಮೂಲಿ ಟೈಮ್‌ಗೆ ವಿಮಾನ ಹತ್ತಲು ಹೋದ್ರೆ ಮಿಸ್ ಆಗುವುದು ಗ್ಯಾರಂಟಿ

ಪಾಕ್‌, ಭಾರತ ನಡುವೆ ಹೆಚ್ಚಿದ ಉದ್ವಿಗ್ನತೆ: ಚೀನಾಗೂ ತಟ್ಟಿದ ಬಿಸಿ, ನಾಗರಿಕರಿಗೆ ಸಂದೇಶ ರವಾನೆ

ಸರ್ಕಾರದ ಈ ಕ್ರಮವು ದೇಶದ ಸ್ವಾಭಿಮಾನವನ್ನು ಹೆಚ್ಚಿಸಿದೆ: ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ RSS

ಮುಂದಿನ ಸುದ್ದಿ
Show comments