Select Your Language

Notifications

webdunia
webdunia
webdunia
webdunia

ಚಿತ್ರದುರ್ಗದಲ್ಲೂ ಹಿಜಾಬ್ ವಿವಾದ ಎಂಟ್ರಿ

ಚಿತ್ರದುರ್ಗದಲ್ಲೂ ಹಿಜಾಬ್ ವಿವಾದ ಎಂಟ್ರಿ
ಚಿತ್ರದುರ್ಗ , ಗುರುವಾರ, 17 ಫೆಬ್ರವರಿ 2022 (09:23 IST)
ಕೋಟೆನಾಡು ಚಿತ್ರದುರ್ಗಕ್ಕೂ ಹಿಜಾಬ್ ವಿವಾದ ಎಂಟ್ರಿಯಾದ ಹಿನ್ನೆಲೆ ಇಂದು ಮತ್ತೆ ಹಿಜಾಬ್ ಧರಿಸಿ ಬಂದು ಧರಣಿ ಮಾಡುವ ಸಾಧ್ಯತೆಯಿದೆ.
ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುವುದಾಗಿ ಪಟ್ಟು ಬಿದ್ದಿದ್ದಾರೆ. ನಿನ್ನೆ ಹಲವು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಬಳಿ ಧರಣಿ ನಡೆಸಿದ್ದರು.

ಪಿಯು ಕಾಲೇಜಿನಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಕೋರ್ಟ್ ಆದೇಶ ಪಾಲನೆಗೆ ಡಿಸಿ ಕವಿತಾ ಮನ್ನಿಕೇರಿ ಸೂಚಿಸಿದ್ದರು. ಡಿಸಿ ಮಾತಿಗೂ ಸಹಮತ ನೀಡದೆ ವಿದ್ಯಾರ್ಥಿಗಳು ಮನೆಗೆ ತೆರಳಿದ್ದರು.

ನಿನ್ನೆ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮನೆಗೆ ವಾಪಸ್ ತೆರಳಿದ್ದರು. ಇಂದು ಮತ್ತೆ ಹಿಜಾಬ್ ಧರಿಸಿ ಕಾಲೇಜಿಗೆ ಬರುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ಕಾಲೇಜುಗಳ ಬಳಿ ಪೊಲೀಸರು ನಿಗಾ ವಹಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ!?