Select Your Language

Notifications

webdunia
webdunia
webdunia
webdunia

ಭಾರೀ ಮಳೆ : ಮತ್ತೆ ಸರ್ವೇ ಮಾಡಿ ಎಂದ ಸಚಿವ

ಭಾರೀ ಮಳೆ : ಮತ್ತೆ ಸರ್ವೇ ಮಾಡಿ ಎಂದ ಸಚಿವ
ಯಾದಗಿರಿ , ಬುಧವಾರ, 16 ಸೆಪ್ಟಂಬರ್ 2020 (22:30 IST)
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದೆ.

ಈ ನಡುವೆ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ ಹಾಗೂ ಬೆಳೆ ಹಾನಿ ಸಂಭವಿಸಿದೆ.

ಈ ಎರಡೂ ಜಿಲ್ಲೆಗಳಲ್ಲಿ ಎರಡನೇ ಹಂತದಲ್ಲಿ ಮತ್ತೆ ಸರ್ವೇ ನಡೆಸಬೇಕು. ಎರಡನೇ ಹಂತದ ಸರ್ವೇ ನಡೆಸಿ ಸಂಪೂರ್ಣವಾದ ಬಳಿಕ ವರದಿಯನ್ನು ನೀಡಬೇಕೆಂದು ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಮಳೆಯಿಂದಾಗಿ ಬೆಳೆ ಹಾನಿ ಹಿಂದಿಗಿಂತ ಹೆಚ್ಚಾಗಿದ್ದು, ವರದಿ ಬಂದ ಬಳಿಕವಷ್ಟೇ ನಷ್ಟದ ಪ್ರಮಾಣದ ಬಗ್ಗೆ ನಿಖರವಾಗಿ ಗೊತ್ತಾಗಲಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ದೆಹಲಿಗೆ ಹೋದ್ರೂ ಸಚಿವ ಸಂಪುಟ ವಿಸ್ತರಣೆ ಆಗೋದಿಲ್ಲ