Select Your Language

Notifications

webdunia
webdunia
webdunia
webdunia

ಬೆಟ್ಟದಲ್ಲಿ ಭಾರಿ ಅಗ್ನಿ ದುರಂತ

ಬೆಟ್ಟದಲ್ಲಿ ಭಾರಿ ಅಗ್ನಿ ದುರಂತ
ಚಿಕ್ಕಬಳ್ಳಾಪುರ , ಶನಿವಾರ, 19 ಜನವರಿ 2019 (19:25 IST)
ಬೆಟ್ಟವೊಂದರಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬುರಡುಗುಂಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಆಂಜನೇಯಸ್ವಾಮಿ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ ಬೆಟ್ಟಕ್ಕೆ ವ್ಯಾಪಿಸಿಕೊಂಡಿದೆ. ಬುರುಡುಗುಂಟೆ ಗ್ರಾಮದ ಹೊರವಲಯದ ಉರಬೆಟ್ಟದಲ್ಲಿ ಅಗ್ನಿಯ ಜ್ವಾಲೆ ಹರಡಿಕೊಂಡಿದೆ. ಇಡೀ ಬೆಟ್ಟವನ್ನು ಆಕ್ರಮಿಸಿದ ಅಗ್ನಿ ಜ್ವಾಲೆಗೆ ಗ್ರಾಮಸ್ಥರು ಭಯಭೀತಿಗೊಂಡಿದ್ದಾರೆ.  

ಬೆಂಕಿಯನ್ನು ನಂದಿಸುವಲ್ಲಿ ಗ್ರಾಮಸ್ಥರು ಹರಸಾಹಸ ನಡೆಸುತ್ತಿದ್ದಾರೆ. ಬೆಟ್ಟದ ತಪ್ಪಲಿನಲ್ಲಿರುವ ಗ್ರಾಮಗಳಿಗೆ ಬೆಂಕಿ ಜ್ವಾಲೆ ಪಸರಿಸುವ ಶಂಕೆ ವ್ಯಕ್ತವಾಗಿದೆ.

ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಅಗ್ನಿ ಅವಘಡಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ರೆಸಾರ್ಟ್​ ರಾಜಕೀಯ ಶುರು?