ಜಾರಕಿಹೊಳಿ ಕ್ಷೇತ್ರದಲ್ಲಿ ಭಾರೀ ಭ್ರಷ್ಟಾಚಾರ?

Webdunia
ಮಂಗಳವಾರ, 1 ಅಕ್ಟೋಬರ್ 2019 (17:53 IST)
ಗೋಕಾಕ ನಗರದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಅನ್ನೋ ಆರೋಪ ಕೇಳಿಬಂದಿದೆ.

ಗೋಕಾಕ ನಗರಸಭೆಯಲ್ಲಿ ನಾಲ್ವರು ಹಿರಿಯ ಸದಸ್ಯರು ಭಾರಿ ಪ್ರಮಾಣದ ಭ್ರಷ್ಟಾಚಾರವನ್ನು ಎಸಗಿದ್ದು, ಈ ಕುರಿತು ರಾಜ್ಯ ಸರ್ಕಾರದಿಂದ ಉನ್ನತ ಮಟ್ಟದ ತನಿಖೆಯಾಗಬೇಕು. ಹೀಗಂತ ಬಿಜೆಪಿ ಮುಖಂಡ ಅಶೋಕ ಪೂಜಾರಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಗರಸಭೆಯಲ್ಲಿ ನಡೆದ ಬ್ರಷ್ಟಾಚಾರ ಆರೋಫದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು.
ಕಳೆದ 20 ವರ್ಷಗಳಿಂದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಕಿರಿಯ ಸಹೋದರ  ಲಖನ್ ಜಾರಕಿಹೊಳಿ ಅವರ ನಿಯಂತ್ರಣದಲ್ಲಿದೆ. ಅವರ ಅನುಮತಿ ಇಲ್ಲದೆ ನಗರಸಭೆಯಲ್ಲಿ ಒಂದು ಕಡ್ಡಿಯೂ ಅಲುಗಾಡುವುದಿಲ್ಲ.

ಅಲ್ಲಿಯ ಎಲ್ಲ ನಿರ್ದೇಶನಗಳು, ಠರಾವುಗಳು ಮಂಜೂರಾತಿಗಳು ಇವರಿಬ್ಬರ ಇಚ್ಛೆಗೆ ಪೂರಕವಾಗಿ ನಡೆಯುತ್ತವೆ. ಅವರ ಅರಿವಿಗೆ ಬಾರದೇ ಯಾವುದೇ ಹಣಕಾಸಿನ ಮಂಜೂರಾತಿಯೂ ಆಗುವುದಿಲ್ಲ. ಹೀಗಿದ್ದರೂ  ಭ್ರಷ್ಟಾಚಾರ  ನಡೆದಿರುವುದು ಗೂಡಾರ್ಥವಾಗಿದೆ ಇದಕ್ಕೆ ಉತ್ತರಿಸಬೇಕಾದ ನಗರಸಭೆಯ ನಾಲ್ವರು ಹಿರಿಯ ಸದಸ್ಯರು ಮೌನಕ್ಕೆ ಶರಣಾಗಿರುವುದು ಜನರಿಗೆ ಅಚ್ಚರಿ ಮೂಡಿಸಿದೆ.

ಭ್ರಷ್ಟಾಚಾರದ ನಿಜವಾದ  ಪಾಲುದಾರರು ಯಾರು? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉನ್ನತ ಮಟ್ಟದ ತನಿಖೆಯಿಂದಲೇ ಉತ್ತರ ದೊರೆಯಬೇಕು. ಸರ್ಕಾರ ಕೂಡಲೇ ಉನ್ನತ ಮಟ್ಟದ ತನಿಖೆಯನ್ನು   ನಡೆಸಬೇಕೆಂದು ಸರಕಾರವನ್ನು ಆಗ್ರಹಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನಾ ಬಿಗ್ ಸ್ಕೆಚ್ ಹಾಕಿದ್ದ ಮೋಸ್ಟ್ ವಾಟೆಂಡ್ ಗ್ಯಾಂಗ್‌ ಎನ್‌ಕೌಂಟರ್‌

ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು: ಮಂಡಳಿಯ ಹಿರಿಯ ಅಧಿಕಾರಿ ಅರೆಸ್ಟ್‌

ಆರ್ ಎಸ್ಎಸ್ ಪಥಸಂಚಲನದ ಫೋಟೋ ಎಡಿಟ್ ಮಾಡಿತಾ ಭೀಮ್ ಆರ್ಮಿ: ಫುಲ್ ಟ್ರೋಲ್

ದೀಪಾವಳಿ ಸಂದರ್ಭದಲ್ಲಿ ಅವಘಡ: ಕೊಬ್ಬರಿ ಹೋರಿ ಸ್ಪರ್ಧೆಯ ಹೋರಿ ತಿವಿದು ಮೂವರು ಸಾವು

ಡಾ ಕೃತಿಕಾ ರೆಡ್ಡಿ ಮರ್ಡರ್ ಮಾಡಿದ್ದ ಡಾ ಮಹೇಂದ್ರ ಅಸಲಿ ವಿಚಾರಗಳು ಕೊನೆಗೂ ಬಯಲು

ಮುಂದಿನ ಸುದ್ದಿ
Show comments