Webdunia - Bharat's app for daily news and videos

Install App

ಮಂಕು ಬರಿಸಿ ಮಹಿಳೆಯ ಚೈನ್ ಎಗರಿಸಿದ ಚಾಲಾಕಿ

Webdunia
ಮಂಗಳವಾರ, 1 ಅಕ್ಟೋಬರ್ 2019 (17:47 IST)
ಅಪರಿಚಿತೆಯೊಬ್ಬಳು ಮಹಿಳೆಯೊಬ್ಬರಿಗೆ ಮಂಕು ಬರಿಸಿ ಚಿನ್ನದ ಸರ ಎಗರಿಸಿ ಪರಾರಿಯಾಗಿರೋ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಕಿಕ್ಕೇರಿ ಪಟ್ಟಣದ ಮಂದಗೆರೆ ವೃತ್ತದಲ್ಲಿ ಅಪರಿಚಿತ ಮಹಿಳೆಯೆಯೊಬ್ಬಳು ಕಿಕ್ಕೇರಿ ಸಮೀಪದ ತೆಂಗಿನಘಟ್ಟ ಗ್ರಾಮದ ಲಕ್ಷಮ್ಮ ಎಂಬುವರಿಗೆ ಮಂಕು ಬರಿಸಿ ಮಾಂಗಲ್ಯದ ಚಿನ್ನದ  ಚೈನು (30 ಗ್ರಾಂ) ದೋಚಿರುವ ಘಟನೆ ನಡೆದಿದೆ.

ಲಕ್ಷ್ಮಮ್ಮ (50)  ಎಂಬುವರು ಅಂಗಡಿ ಸಾಮಗ್ರಿ‌ ಕೊಳ್ಳಲು ಕಿಕ್ಕೇರಿ ಪಟ್ಟಣಕ್ಕೆ ಬಂದಿದ್ದರು. ಅಪರಿಚಿತ ಮಹಿಳೆಯೊಬ್ಬಳು ಮಾತಾಡಿಸುವ ನೆಪದಲ್ಲಿ ಮಂಕು ಬರಿಸಿ ಚೈನು ಕಸಿದುಕೊಂಡಿದ್ದಾಳೆ.

ಅರ್ಧ ಗಂಟೆ ಬಳಿಕ  ಎಚ್ಚರಗೊಂಡ ಲಕ್ಷ್ಮಮ್ಮ ತಮ್ಮ ಚೈನು ನೋಡಿದಾಗ ಗಾಬರಿಯಿಂದ  ಅಲ್ಲಿಯೇ ಅತ್ತು ಕರೆದು ಕಿಕ್ಕೇರಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಕಿಕ್ಕೇರಿ ಪೊಲೀಸ್ ಠಾಣೆಯ  ಎ ಎಸ್ ಐ ಗುರುಭಸಯ್ಯ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments